ಇತ್ತೀಚೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಘೋಷಣೆಯಾದ ಸಂದರ್ಭ ತನ್ನನ್ನು ಪ್ರಶಸ್ತಿಗಾಗಿ ಪರಿಗಣಿಸಿಲ್ಲ ಎಂದು ಬಹಿರಂಗವಾಗಿ ಬೇಸರ ಹೊರಹಾಕಿದ್ದ ಭಜರಂಗ್ ಅವರ ಹೆಸರನ್ನು ಇದೀಗ ಕೇಂದ್ರ ಕ್ರೀಡಾ ಸಚಿವಾಲಯ "ಪದ್ಮಶ್ರೀ" ಪ್ರಶಸ್ತಿಗಾಗಿ ಸೂಚಿಸಿದೆ. ವಿಶೇಷವೆಂದರೆ ಭಾರತ ಕುಸ್ತಿ ಸಂಘಟನೆ ಭಜರಂಗ್ ಹಾಗೂ ವಿನೇಶ್ ಹೆಸರನ್ನು ಪದ್ಮ ಪ್ರಶಸ್ತಿಗೆ ಸೂಚಿಸಿಲ್ಲವಾದರೂ ಕ್ರೀಡಾ ಸಚಿವಾಲಯ ಸ್ವಯಂಪ್ರೇರಿತವಾಗಿ ಇಬ್ಬರ ಹೆಸರನ್ನು ಪ್ರಶಸ್ತಿಗೆ ಪರಿಗಣಿಸುವಂತೆ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಬರೆದಿದೆ.