ಡೆನ್ಮಾರ್ಕ್ ಓಪನ್ ಗಾಗಿ ಒಡೆನ್ಸ್ ಗೆ ತೆರಳುತ್ತಿದ್ದ ಪರುಪಲ್ಲಿ ಕಶ್ಯಪ್ ಆಮ್ಸ್ಟರ್ಡ್ಯಾಮ್ ನಲ್ಲಿ ಪಾಸ್ಪೋರ್ಟ್ ಕಳೆದುಕೊಂಡಿದ್ದು, ಸಹಾಯಕ್ಕಾಗಿ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಮೊರೆ ಹೋಗಿದ್ದಾರೆ. ಪಾಸ್ಪೋರ್ಟ್ ಕಳೆದುಕೊಂಡಿರುವುದರಿಂದ ಆಮ್ಸ್ಟರ್ಡ್ಯಾಮ್ ವಿಮಾನದಲ್ಲೇ ಸ್ಥಗಿತಗೊಂಡಿರುವ ಕಶ್ಯಪ್ ಡೆನ್ಮಾರ್ಕ್ ಓಪನ್ ಗಾಗಿ ಭಾನುವಾರ ಒಡೆನ್ಸ್ ಗೆ ತೆರಳಬೇಕಿತ್ತು. ಟ್ವಿಟರ್ ನಲ್ಲಿ ತಮ್ಮ ಪರಿಸ್ಥಿತಿಯನ್ನು ವಿವರಿಸಿರುವ ಕ್ರೀಡಾಪಾಟು, ತಮ್ಮ ಪೋಸ್ಟ್ ನಲ್ಲಿ ಪ್ರಧಾನಿ ಮೋದಿ, ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರನ್ನು ಟ್ಯಾಗ್ ಮಾಡಿದ್ದಾರೆ.