ಆಮ್ಸ್ಟರ್ಡ್ಯಾಮ್ ನಲ್ಲಿ ಪಾಸ್ಪೋರ್ಟ್ ಕಳೆದುಕೊಂಡು ಶಟ್ಲರ್ ಕಶ್ಯಪ್: ಸುಷ್ಮಾ ಬಳಿ ನೆರವು ಕೋರಿಕೆ

ಭಾರತದ ಪುರುಷರ ಸಿಂಗಲ್ಸ್ ವಿಭಾಗದ ಶಟ್ಲರ್ ಪರುಪಲ್ಲಿ ಕಶ್ಯಪ್ ಅವರು ಆಮ್ಸ್ಟರ್ಡ್ಯಾಮ್ ನಲ್ಲಿ ಪಾಸ್ಪೋರ್ಟ್ ಕಳೆದುಕೊಂಡಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆಮ್ಸ್ಟರ್ಡ್ಯಾಮ್ ನಲ್ಲಿ ಪಾಸ್ಪೋರ್ಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಶಟ್ಲರ್ ಕಶ್ಯಪ್: ಸುಷ್ಮಾ ಬಳಿ  ನೆರವು ಕೋರಿಕೆ
ಆಮ್ಸ್ಟರ್ಡ್ಯಾಮ್ ನಲ್ಲಿ ಪಾಸ್ಪೋರ್ಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಶಟ್ಲರ್ ಕಶ್ಯಪ್: ಸುಷ್ಮಾ ಬಳಿ ನೆರವು ಕೋರಿಕೆ
Updated on
ಭಾರತದ ಪುರುಷರ ಸಿಂಗಲ್ಸ್ ವಿಭಾಗದ ಶಟ್ಲರ್ ಪರುಪಲ್ಲಿ ಕಶ್ಯಪ್ ಅವರು ಆಮ್ಸ್ಟರ್ಡ್ಯಾಮ್ ನಲ್ಲಿ ಪಾಸ್ಪೋರ್ಟ್ ಕಳೆದುಕೊಂಡಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ.
ಡೆನ್ಮಾರ್ಕ್ ಓಪನ್ ಗಾಗಿ  ಒಡೆನ್ಸ್ ಗೆ ತೆರಳುತ್ತಿದ್ದ ಪರುಪಲ್ಲಿ ಕಶ್ಯಪ್ ಆಮ್ಸ್ಟರ್ಡ್ಯಾಮ್ ನಲ್ಲಿ ಪಾಸ್ಪೋರ್ಟ್ ಕಳೆದುಕೊಂಡಿದ್ದು, ಸಹಾಯಕ್ಕಾಗಿ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಮೊರೆ ಹೋಗಿದ್ದಾರೆ.  ಪಾಸ್ಪೋರ್ಟ್ ಕಳೆದುಕೊಂಡಿರುವುದರಿಂದ ಆಮ್ಸ್ಟರ್ಡ್ಯಾಮ್ ವಿಮಾನದಲ್ಲೇ ಸ್ಥಗಿತಗೊಂಡಿರುವ ಕಶ್ಯಪ್ ಡೆನ್ಮಾರ್ಕ್ ಓಪನ್ ಗಾಗಿ ಭಾನುವಾರ ಒಡೆನ್ಸ್ ಗೆ ತೆರಳಬೇಕಿತ್ತು. ಟ್ವಿಟರ್ ನಲ್ಲಿ ತಮ್ಮ ಪರಿಸ್ಥಿತಿಯನ್ನು ವಿವರಿಸಿರುವ ಕ್ರೀಡಾಪಾಟು, ತಮ್ಮ ಪೋಸ್ಟ್ ನಲ್ಲಿ ಪ್ರಧಾನಿ ಮೋದಿ, ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರನ್ನು ಟ್ಯಾಗ್ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com