2014ರಿಂದಲೇ ಡಬ್ಲ್ಯುಎಫ್‌ಐ ಅಧ್ಯಕ್ಷರಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಫಿಸಿಯೋಥೆರಪಿಸ್ಟ್

2014 ರಲ್ಲಿ ಲಖನೌನಲ್ಲಿ ನಡೆದ ಭಾರತೀಯ ಕ್ರೀಡಾ ಪ್ರಾಧಿಕಾರದ(ಎಸ್‌ಎಐ) ಮಹಿಳಾ ಕುಸ್ತಿ ಶಿಬಿರದಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡಿದ ವ್ಯಕ್ತಿಯೊಬ್ಬರು ಮುಂದೆ ಬಂದು, ಮಹಿಳಾ ಕುಸ್ತಿಪಟುಗಳಿಗೆ ಭಾರತೀಯ ಕುಸ್ತಿ...
ಮಹಿಳಾ ಕುಸ್ತಿಪಟುಗಳು
ಮಹಿಳಾ ಕುಸ್ತಿಪಟುಗಳು

ನವದೆಹಲಿ: 2014 ರಲ್ಲಿ ಲಖನೌನಲ್ಲಿ ನಡೆದ ಭಾರತೀಯ ಕ್ರೀಡಾ ಪ್ರಾಧಿಕಾರದ(ಎಸ್‌ಎಐ) ಮಹಿಳಾ ಕುಸ್ತಿ ಶಿಬಿರದಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡಿದ ವ್ಯಕ್ತಿಯೊಬ್ಬರು ಮುಂದೆ ಬಂದು, ಮಹಿಳಾ ಕುಸ್ತಿಪಟುಗಳಿಗೆ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಹಲವು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

“2014 ರಲ್ಲಿ, ಗೀತಾ ಫೋಗಟ್ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದರು ಮತ್ತು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದ್ದರಿಂದ ಅವರು ತಮ್ಮ ಮೊಣಕಾಲಿನ ಬಲವರ್ಧನೆ ಮತ್ತು ಸಜ್ಜುಗೊಳಿಸುವಿಕೆಗಾಗಿ ಶಸ್ತ್ರಚಿಕಿತ್ಸೆಯ ನಂತರದ ಚಿಕಿತ್ಸೆಗಾಗಿ ಲಖನೌದ ಮಹಿಳಾ ಕುಸ್ತಿ ಕೇಂದ್ರಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಆ ಸಮಯದಲ್ಲಿ ಮುಖ್ಯ ತರಬೇತುದಾರರು ಅಲ್ಲಿರುವ ಎಲ್ಲಾ ಮಹಿಳಾ ಕುಸ್ತಿಪಟುಗಳಿಗೆ ಸಹಾಯ ಮಾಡಲು ನನ್ನನ್ನು ಕೇಳಿಕೊಂಡರು ಮತ್ತು ಅವರು ನನ್ನನ್ನು ಅಧಿಕೃತ ಫಿಸಿಯೋಥೆರಪಿಸ್ಟ್ ಆಗಿ ನೇಮಿಸಿದರು,” ಎಂದು ಪರಮ್‌ಜೀತ್ ಮಲಿಕ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಲಖನೌ ಶಿಬಿರದಲ್ಲಿ ಕೆಲಕಾಲ ತಂಗಿದ್ದಾಗ ಮಹಿಳಾ ಕುಸ್ತಿಪಟುಗಳಲ್ಲಿ ಭಯದ ವಾತಾವರಣವಿರುವುದು ನನ್ನ ಗಮನಕ್ಕೆ ಬಂದು ಎಂದು ಮಲಿಕ್ ಹೇಳಿದ್ದಾರೆ.

"ಮಹಿಳಾ ಕುಸ್ತಿಪಟುಗಳಿಗೆ ನಿಯಮಿತವಾಗಿ ಬೆದರಿಕೆ ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತಿತ್ತು. ಅವರು ಹುಡುಗಿಯರ ಮೇಲೆ ಒತ್ತಡ ಹೇರಲು ಪೋಷಕರಿಗೆ ಕರೆ ಮಾಡಿ ಅವರು ಸರಿಯಾಗಿ ಅಭ್ಯಾಸ ಮಾಡುತ್ತಿಲ್ಲ ಎಂದು ಹೇಳುತ್ತಿದ್ದರು ” ಎಂದು ಮಲಿಕ್ ತಿಳಿಸಿದ್ದಾರೆ.

“ಬ್ರಿಜ್ ಭೂಷಣ್ ಅವರ ನಿಕಟ ಸಹಾಯಕರಾಗಿದ್ದ ಧೀರೇನ್ ಎಂಬ ವ್ಯಕ್ತಿ, ಮಹಿಳಾ ಕುಸ್ತಿಪಟುಗಳಿಗೆ ಹಮ್ ಆಪ್ಕೋ ನೇತಾ ಜಿ(ಬ್ರಿಜ್ ಭೂಷಣ್) ಸೆ ಮಿಲಾ ದೇಂಗೆ, ಬೇಷಕ್ ಆಪ್ಕೋ ಚೋಟ್ ಲಾಗ್ ಜಾಯೆ ಎಂದು ಹೇಳುತ್ತಿದ್ದರು; ಅವನು ನಿಮ್ಮನ್ನು ಫಿಟ್ ಎಂದು ಘೋಷಿಸುತ್ತಾನೆ. ಧೀರೇನ್‌ನ ಹೊರತಾಗಿ, ಇನ್ನೂ ಕೆಲವು ಹುಡುಗಿಯರು ಸಹ ಮಹಿಳಾ ಕುಸ್ತಿಪಟುಗಳನ್ನು ಪ್ರೇರೇಪಿಸಿ ಅವರ ಬಳಿಗೆ ಕರೆದೊಯ್ಯುತ್ತಿದ್ದರು. ಅವರನ್ನು ಯಾವ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ನನಗೆ ತಿಳಿದಿಲ್ಲ. ಆದರೆ ಅವರು ಈ ಹುಡುಗಿಯರನ್ನು ಬ್ರಿಜ್ ಭೂಷಣ್ ಮನೆಗೆ ಕರೆದುಕೊಂಡು ಹೋಗುತ್ತಿದ್ದರು ಎಂದು ನನಗೆ ತಿಳಿದಿದೆ” ಎಂದು ಮಲಿಕ್ ಹೇಳಿದ್ದಾರೆ.

ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಮಾಡಲಾಗುತ್ತಿರುವ ಆರೋಪಗಳ ತನಿಖೆಗಾಗಿ ಈ ವರ್ಷದ ಜನವರಿಯಲ್ಲಿ ಕೇಂದ್ರ ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವಾಲಯ ರಚಿಸಿದ್ದ ಉಸ್ತುವಾರಿ ಸಮಿತಿಯ ಮುಂದೆಯೂ ಮಲಿಕ್ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದಾರೆ.

ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿ ಏಪ್ರಿಲ್ 23 ರಂದು, ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಹಾಗೂ ಡಬಲ್ ವರ್ಲ್ಡ್ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಭಾರತದ ಅಗ್ರ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮತ್ತೆ ಪ್ರತಿಭಟನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com