social_icon

ಅತ್ಯಂತ ಅಪಾಯಕಾರಿ ಗೋಲ್ಡನ್ ಗ್ಲೋಬ್ ರೇಸ್‌ನಲ್ಲಿ 2ನೇ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದ ಅಭಿಲಾಷ್ ಟೋಮಿ!

ಭಾರತೀಯ ನೌಕಾಪಡೆಯ ಮಾಜಿ ಕಮಾಂಡರ್ ಅಭಿಲಾಷ್ ಟೋಮಿ ಗೋಲ್ಡನ್ ಗ್ಲೋಬ್ ರೇಸ್‌ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಟೋಮಿ ಈ ಓಟವನ್ನು ಪೂರ್ಣಗೊಳಿಸಿದ ಮೊದಲ ಭಾರತೀಯರಾಗಿದ್ದಾರೆ. 

Published: 29th April 2023 05:51 PM  |   Last Updated: 29th April 2023 07:33 PM   |  A+A-


ಅಭಿಲಾಷ್ ಟೋಮಿ

Posted By : Vishwanath S
Source : The New Indian Express

ನವದೆಹಲಿ: ಭಾರತೀಯ ನೌಕಾಪಡೆಯ ಮಾಜಿ ಕಮಾಂಡರ್ ಅಭಿಲಾಷ್ ಟೋಮಿ ಗೋಲ್ಡನ್ ಗ್ಲೋಬ್ ರೇಸ್‌ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಟೋಮಿ ಈ ಓಟವನ್ನು ಪೂರ್ಣಗೊಳಿಸಿದ ಮೊದಲ ಭಾರತೀಯರಾಗಿದ್ದಾರೆ. 

ಇದು ವಿಶ್ವದ ಅತ್ಯಂತ ಕಷ್ಟಕರ ಮತ್ತು ಅಪಾಯಕಾರಿ ರೇಸ್ ಇದಾಗಿದೆ. ಅಭಿಲಾಷ್ ಏಪ್ರಿಲ್ 29ರಂದು ಫ್ರಾನ್ಸ್‌ನ ಲೆಸ್ ಸೇಬಲ್ಸ್ ಡಿ'ಒಲೋನ್‌ನಲ್ಲಿ ಈ ರೇಸ್ ಅನ್ನು ಪೂರ್ಣಗೊಳಿಸಿದರು. ದಕ್ಷಿಣ ಆಫ್ರಿಕಾದ ಕರ್ಸ್ಟನ್ ನ್ಯೂಶಾಫರ್ ಮೊದಲ ಸ್ಥಾನ ಪಡೆದಿದ್ದಾರೆ. ಸೆಪ್ಟೆಂಬರ್ 2022ರಲ್ಲಿ ಪ್ರಾರಂಭವಾದ ಈ ಓಟದಲ್ಲಿ 16 ಮಂದಿ ಭಾಗಿಯಾಗಿದ್ದರು. ಅಭಿಲಾಷ್ ಈ ಹಿಂದೆ 2018ರಲ್ಲಿ ಗೋಲ್ಡನ್ ಗ್ಲೋಬ್ ರೇಸ್‌ನಲ್ಲಿ ಭಾಗವಹಿಸಿದ್ದರು.

ಅಭಿಲಾಷ್ ಟೋಮಿ

ಗೋಲ್ಡನ್ ಗ್ಲೋಬ್ ರೇಸ್ ಅನ್ನು ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ರೋಮಾಂಚಕಾರಿ ದೋಣಿ ರೇಸ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಸಮುದ್ರದ ಮೂಲಕ ಇಡೀ ಜಗತ್ತನ್ನು ಸುತ್ತಬೇಕು. ಅದೂ ಏಕಾಂಗಿಯಾಗಿ, ತಡೆರಹಿತ ಮತ್ತು ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದೆ. ಮೊದಲ ರೇಸ್ ಸಮಯದಲ್ಲಿ ಅಂದರೆ 1968ರ ಸಮಯದಲ್ಲಿ ಲಭ್ಯವಿದ್ದ ತಾಂತ್ರಿಕ ಬೆಂಬಲ ಮಾತ್ರ ಲಭ್ಯವಿದೆ. ದಾರಿಯುದ್ದಕ್ಕೂ ಸಮುದ್ರದ ಬಿರುಗಾಳಿಗಳು, ಅಪಾಯಕಾರಿ ಮೀನುಗಳು ಮತ್ತು ಅನಿಶ್ಚಿತ ಹವಾಮಾನವನ್ನು ಎದುರಿಸಬೇಕಾಗುತ್ತದೆ.

ಅಭಿಲಾಷ್ ಟೋಮಿ 2018ರಲ್ಲಿ ಮೊದಲ ಬಾರಿಗೆ ಈ ರೇಸ್‌ನಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿರುವ ಏಕೈಕ ಭಾರತೀಯರಾಗಿದ್ದರು. ಆರಂಭಿಕ ಹಂತದಲ್ಲಿ ಅಭಿಲಾಷ್ ಅವರ ಪ್ರಯಾಣವು ಉತ್ತಮವಾಗಿ ಸಾಗುತ್ತಿತ್ತು. ಆದರೆ ನಂತರ ಯಾರ ಹೃದಯವನ್ನು ಬೆಚ್ಚಿಬೀಳಿಸುವಂಥದ್ದು ಸಂಭವಿಸಿತು. 2018ರ ಸೆಪ್ಟೆಂಬರ್ 21ರಂದು ಅಭಿಲಾಷ್ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಎಲ್ಲೋ ಸಿಲುಕಿದ್ದರು. ನಂತರ ಭೀಕರ ಚಂಡಮಾರುತ ಬಂದಿತು. ಅದು ಬೋಟ್ ಅನ್ನು ನಾಶಮಾಡಿತು. ಈ ವೇಳೆ ಅಭಿಲಾಷ್ ತನ್ನ ಕೈ ಗಡಿಯಾರದ ಸಹಾಯದಿಂದ ದೋಣಿಯ ಪಟದಲ್ಲಿ ನೇತಾಡುತ್ತಿದ್ದ. ಈ ಅವಘಡ ಸಂಭವಿಸಿದಾಗ ಸಮುದ್ರದಲ್ಲಿ ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಈ ವೇಳೆ ಅಲೆಗಳು 40-50 ಅಡಿ ಎತ್ತರಕ್ಕೆ ಎದ್ದಿದ್ದವು.

ಅಭಿಲಾಷ್ ಟೋಮಿ

ಅಭಿಲಾಷ್ ಅವರ ಸಹಾಯದ ಸಂದೇಶದ ನಂತರ ಅಂತಾರಾಷ್ಟ್ರೀಯ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಯಿತು. ಭಾರತ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ನ ನೌಕಾಪಡೆಯ ಹಡಗುಗಳು ಅಭಿಲಾಷ್‌ನನ್ನು ಹುಡುಕಲು ಹೊರಟವು. ಎರಡು ಹಗಲು ಎರಡು ರಾತ್ರಿಗಳ ನಂತರ ಶೋಧ ಕಾರ್ಯಾಚರಣೆ ಮುಗಿಸಿ ಅಭಿಲಾಷ್‌ನನ್ನು ವಿಶಾಖಪಟ್ಟಣಕ್ಕೆ ಕರೆತರಲಾಯಿತು. ಅವನ ಬದುಕುಳಿಯುವುದು ತುಂಬಾ ಕಷ್ಟ ಎಂದು ನಂಬಲಾಗಿತ್ತು. ಆದರೆ ಚೈತನ್ಯದಿಂದ ಸಮೃದ್ಧವಾಗಿರುವ ಅಭಿಲಾಷ್‌ನ ಪ್ರಯಾಣ ಇನ್ನೂ ಅಪೂರ್ಣವಾಗಿತ್ತು. 

ಅಪಘಾತದಲ್ಲಿ ಸಾಕಷ್ಟು ಗಾಯಗಳಾಗಿರುವ ಕಾರಣ, ಟೈಟಾನಿಯಂ ನಟ್ಸ್ ಮತ್ತು ಬೋಲ್ಟ್‌ಗಳನ್ನು ಅವರ ದೇಹಕ್ಕೆ ಅಳವಡಿಸಬೇಕಾಯಿತು. ಹಠಮಾರಿ ಅಭಿಲಾಷ್ ಎರಡು ತಿಂಗಳ ನಂತರ ತನ್ನ ಕೆಲಸಕ್ಕೆ ಮರಳಿದನು. ಅವರು ನೌಕಾಪಡೆಯಲ್ಲಿ ಪೈಲಟ್ ಆಗಿದ್ದರು. ಅಭಿಲಾಷ್ ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ನೌಕಾಪಡೆಯ ಕೆಲಸವನ್ನು ತೊರೆದರು. 2022ರ ಸೆಪ್ಟೆಂಬರ್‌ನಲ್ಲಿ ಆತನ ಪ್ರಾಣ ತೆಗೆಯಲು ಯತ್ನಿಸಿದ ಪ್ರಯಾಣಕ್ಕೆ ಮತ್ತೆ ಕರೆ ಮಾಡಿದಾಗ, ಅವರು ತಕ್ಷಣವೇ ಹೌದು ಎಂದು ಹೇಳಿದರು.


Stay up to date on all the latest ಕ್ರೀಡೆ news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp