ದೇವಮಾನವರ ಆಶ್ರಮಗಳು 'ಭಯೋತ್ಪಾದನಾ' ಕೇಂದ್ರಗಳಾಗುತ್ತಿವೆ: ಬಿಜೆಪಿ

ರಾಮ್‌ಪಾಲ್‌ನಂತ ದೇವ ಮಾನವರಿಂದ ನಡೆಸಲ್ಪಡುವ ಆಶ್ರಮಗಳು ಭಕ್ತಿಯ ಹೆಸರಲ್ಲಿ ಭಯೋತ್ಪಾದನೆಯನ್ನು ಹುಟ್ಟಿಸುತ್ತವೆ...
ರಾಮ್‌ಪಾಲ್‌
ರಾಮ್‌ಪಾಲ್‌
Updated on

ನವದೆಹಲಿ: ರಾಮ್‌ಪಾಲ್‌ನಂತ ದೇವ ಮಾನವರಿಂದ ನಡೆಸಲ್ಪಡುವ ಆಶ್ರಮಗಳು ಭಕ್ತಿಯ ಹೆಸರಲ್ಲಿ ಭಯೋತ್ಪಾದನೆಯನ್ನು ಹುಟ್ಟಿಸುತ್ತವೆ ಎಂದು ಬಿಜೆಪಿ ಹೇಳಿದೆ.

ಪಕ್ಷದ ಮುಖವಾಣಿ ಕಮಲ್ ಸಂದೇಶದಲ್ಲಿ, ಆಶ್ರಮಗಳು ಭಕ್ತಿಯ ಹೆಸರಲ್ಲಿ ಭಯೋತ್ಪಾದನೆ ಹುಟ್ಟಿಸಿ, ಭಯೋತ್ಪಾದನಾ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇವುಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಬಿಜೆಪಿ ಹೇಳಿದೆ.

ರಾಮ್‌ಪಾಲ್‌ನಂತವರು ಒಂದೇ ದಿನದಲ್ಲಿ ಹುಟ್ಟಿಕೊಳ್ಳುವುದಿಲ್ಲ. ಇಂಥವರು ಸಮಾಜದಲ್ಲಿ ಮೂಢನಂಬಿಕೆಗಳನ್ನು ಪಸರಿಸಿ, ತಮ್ಮ ಜಾಲವನ್ನು ಬೆಳೆಸಿಕೊಂಡು ಹೋಗುತ್ತಾರೆ. ಆದ್ದರಿಂದ ಈ ಆಶ್ರಮಗಳು ಆರಂಭವಾಗುವ ಹೊತ್ತಿಗೇ ಅವುಗಳನ್ನು ನಿಷೇಧಕ್ಕೊಳಪಡಿಸಬೇಕು.

ಯಾರನ್ನು ನಾವು ಬಾಬಾ ಅಥವಾ ಸ್ವಾಮಿಗಳೆಂದು ಕರೆಯಬೇಕು ಎಂಬುದಕ್ಕೆ ಉತ್ತರವಾಗಿ ಬರೆದ ಬರಹವೊಂದರಲ್ಲಿ ಬಿಜೆಪಿ ಉಪಾಧ್ಯಕ್ಷ ಪ್ರಭಾತ್ ಜಾ, ಮೂಢನಂಬಿಕೆಯ ಮೂಲಕ ಜನರಿಗೆ ಮಂಕುಬೂದಿಯೆರಚುವುದನ್ನು ನೋಡಿದರೆ ನಾವಿನ್ನೂ ಕತ್ತಲ ಯುಗದಲ್ಲೇ ಇದ್ದೀವಿ ಎಂದು ಅನಿಸಿಬಿಡುತ್ತದೆ ಎಂದಿದ್ದಾರೆ.

ರಾಮ್‌ಪಾಲ್‌ನ್ನು ಬಂಧಿಸಿದ ಹರ್ಯಾಣ ಸರ್ಕಾರವನ್ನು ಶ್ಲಾಘಿಸಿದ ಬಿಜೆಪಿ, ಇಂಥಾ ದೇವಮಾನವರನ್ನು ಶಿಕ್ಷೆಗೊಳಪಡಿಸವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನನ್ನು ನೀಡಿದಂತಾಗಿದೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com