ನೂತನ ಸಿ ಬಿ ಐ ನಿರ್ದೇಶಕರಿಗೆ ೨ಜಿ ಮೊಕದ್ದಮೆಯನ್ನು ಕೈಗೆತ್ತಿಕೊಳ್ಳಲು ಅನುಮತಿ

ಹೊಸದಾಗಿ ನೇಮಕಗೊಂಡಿರುವ ಸಿ ಬಿ ಐ ನಿರ್ದೇಶಕ ಅನಿಲ್ ಸಿನ್ಹಾ ಅವರಿಗೆ ೨ಜಿ ಮೊಕದ್ದಮೆಯ ತನಿಖೆಯನ್ನು...
೨ಜಿ ಹಗರಣದ ಪ್ರಮುಖ ಆರೋಪಿ, ಮಾಜಿ ಕೆಂದ್ರ ಸಚಿವ ರಾಜಾ
೨ಜಿ ಹಗರಣದ ಪ್ರಮುಖ ಆರೋಪಿ, ಮಾಜಿ ಕೆಂದ್ರ ಸಚಿವ ರಾಜಾ
Updated on

ನವದೆಹಲಿ: ಹೊಸದಾಗಿ ನೇಮಕಗೊಂಡಿರುವ ಸಿ ಬಿ ಐ ನಿರ್ದೇಶಕ ಅನಿಲ್ ಸಿನ್ಹಾ ಅವರಿಗೆ ೨ಜಿ ಮೊಕದ್ದಮೆಯ ತನಿಖೆಯನ್ನು ತಮ್ಮ ಸುಪರ್ದಿಗೆ ಪಡೆಯಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಈ ಹಿಂದೆ ಕೋರ್ಟ್ ನೀಡಿದ್ದ ಆದೇಶದ ಪ್ರಕಾರ ೨ಜಿ ಹಗರಣದ ಮೊಕದ್ದಮೆಯ ತನಿಖೆಯಿಂದ ಮಾಜಿ ಸಿ ಬಿ ಐ ನಿರ್ದೇಶಕ ರಂಜಿತ್ ಸಿನ್ಹಾ ಅವರನ್ನು ವಜಾ ಮಾಡುವಂತೆ ತಿಳಿಸಿತ್ತು. ಈ ನಿಟ್ಟಿನಲ್ಲಿ ನೂತನ ನಿರ್ದೇಶಕರು ನೇಮಕಗೊಂಡ ಮೇಲೆ ಸಿ ಬಿ ಐ, ಕೋರ್ಟ್ ನ ಸ್ಪಷ್ಟೀಕರಣ ಕೋರಿದ್ದ ಹಿನ್ನಲೆಯಲ್ಲಿ ಕೋರ್ಟ್ ಹೊಸ ಆದೇಶ ನೀಡಿದೆ.

ಡಿಸೆಂಬರ್ ೨ ರಂದು ನ್ಯಾಯಾಲಯ ರಂಜಿತ್ ಸಿನ್ಹಾ ಅವರಿಗೆ ೨ಜಿ ಮೊಕದ್ದಮೆಯ ತನಿಖೆ ಮತ್ತು ಕಾನೂನು ಕ್ರಮದಿಂದ ದೂರ ಉಳಿಯುವಂತೆ ಸೂಚಿಸಿತ್ತು. ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಕೋರಿಕೆ ಮೇರೆ ಸುಪ್ರೀಮ್ ಕೋರ್ಟ್ ಈ ಆದೇಶ ನೀಡಿತ್ತು.

೨ಜಿ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಅಪಾದಿಸಲಾಗಿರುವವರನ್ನು ಹಲವಾರು ಬಾರಿ ರಂಜಿತ್ ಸಿನ್ಹಾ ಭೇಟಿ ಮಾಡಿ, ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಭೂಷಣ್ ನ್ಯಾಯಾಲಯಕ್ಕೆ ತಿಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com