'ಮುಲಾಯಂ ಸಿಂಗ್ ಕಾಣೆಯಾಗಿದ್ದಾರೆ' ಬಿಜೆಪಿ ಪೋಸ್ಟರ್ ನಲ್ಲಿ ವ್ಯಂಗ್ಯ

ಅಜಂಗಢ್ ಸಂಸದ ಮುಲಾಯಂ ಸಿಂಗ್ ಯಾದವ್ ಕಾಣೆಯಾಗಿದ್ದಾರೆ. ಸಮಾಜವಾದಿ ಪಕ್ಷದ ಸದಸ್ಯರಿಗೋ ಇನ್ಯಾರಿಗೋ...
ಮುಲಾಯಂ ಸಿಂಗ್
ಮುಲಾಯಂ ಸಿಂಗ್

ಲಕ್ನೋ: ಅಜಂಗಢ್ ಸಂಸದ ಮುಲಾಯಂ ಸಿಂಗ್ ಯಾದವ್ ಕಾಣೆಯಾಗಿದ್ದಾರೆ. ಸಮಾಜವಾದಿ ಪಕ್ಷದ ಸದಸ್ಯರಿಗೋ ಇನ್ಯಾರಿಗೋ ಮುಲಾಯಂ ಸಿಂಗ್ ಬಗ್ಗೆ ವಿವರಗಳು ತಿಳಿದು ಬಂದರೆ ಅವರಿಗೆ ಬಹುಮಾನ ನೀಡಲಾಗುವುದು ಎಂದು ಬಿಜೆಪಿ ಘೋಷಿಸಿದೆ.    ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮುಲಾಂಯ ಸಿಂಗ್ ಅಜಂಗಢ್ ಕಡೆ ತಿರುಗಿಯೂ ನೋಡಿರಲಿಲ್ಲ.

ಆದ್ದರಿಂದ ಅಲ್ಲಿನ ಬಿಜೆಪಿ ಪ್ರಾದೇಶಿಕ ಸಮಿತಿ ಮುಲಾಯಂ ಸಿಂಗ್ ಕಾಣೆಯಾಗಿದ್ದಾರೆ, ಅವರನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡಲಾಗುವುದು ಎಂದು ಪೋಸ್ಟರ್ ಅಂಟಿಸಿದೆ. ಮುಲಾಯಂ ಸಿಂಗ್ ಅವರ ಫೋಟೋ ಹೊಂದಿರುವ ಪೋಸ್ಟರ್ ಕೆಳಗೆ ಅಜಂಗಢ್ ಕಿ ಜನತಾ ಕರೇ ಪುಕಾರ್,  ಖೋಜೋ ಮುಲಾಯಂ ಪಾವೋ ಇನಾಂ ( ಅಜಂಗಢ್ದ ಜನರು ಕೂಗುತ್ತಿದ್ದಾರೆ, ಮುಲಾಯಂ ಸಿಂಗ್ ಅವರನ್ನು ಪತ್ತೆ ಹಚ್ಚಿ ಬಹುಮಾನ ಗೆಲ್ಲಿ) ಎಂದು ಬರೆಯಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಮುಲಾಯಂ ಅವರು ಮೈನ್ಪುರ್ ಮತ್ತು ಅಜಂಗಢ್ನಲ್ಲಿ ವಿಜಯ ಸಾಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com