ಉಚ್ಛಾಟಿತ ನಾಯಕರು ಮತ್ತೆ ತೆಕ್ಕೆಗೆ; ಸಂಜಯ್ ಸಿಂಗ್ ಸ್ಪಷ್ಟನೆ ಕೇಳಿದ ಎಎಪಿ ಪಂಜಾಬ್ ಘಟಕ

ಆಮ್ ಆದ್ಮಿ ಪಕ್ಷದ ಶಿಸ್ತು ಪಾಲನಾ ಸಮಿತಿ, ಉಚ್ಛಾಟಿತ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನದ ಕುರಿತು ಸ್ಪಷ್ಟನೆ ನೀಡುವಂತೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಲಂಧರ್: ಆಮ್ ಆದ್ಮಿ ಪಕ್ಷದ ಶಿಸ್ತು ಪಾಲನಾ ಸಮಿತಿ, ಉಚ್ಛಾಟಿತ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನದ ಕುರಿತು ಸ್ಪಷ್ಟನೆ ನೀಡುವಂತೆ ಹಿರಿಯ ನಾಯಕ ಸಂಜಯ್ ಸಿಂಗ್ ಅವರಿಗೆ ನೋಟಿಸ್ ನೀಡಿದೆ.

"ಸುಮಾರು ೨೩ ಜನ ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಹೊರಹಾಕಲಾಗಿದ್ದ, ಉಚ್ಛಾಟಿಸಲಾಗಿದ್ದ ನಾಯಕರನ್ನು ಮತ್ತೆ ಪಕ್ಷ ಸೇರುವಂತೆ ಆಹ್ವಾನ ನೀಡಲಾಗಿದೆ ಎಂಬ ವದಂತಿಗಳು ಗಾಳಿಯಲ್ಲಿ ದಟ್ಟವಾಗಿದೆ" ಎಂದು ಎಎಪಿ ಪಕ್ಷ ಪಂಜಾಬ್ ಘಟಕದ ಶಿಸ್ತು ಪಾಲನಾ ಸಮಿತಿ ಸದಸ್ಯ ಪ್ರಣವ್ ರವಿ, ಸಂಜಯ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಮಿತಿ ಉದಾಸೀನ ತೋರಿದ್ದು, ಉಚ್ಛಾಟಿತರನ್ನು ಪಕ್ಷದ ತೆಕ್ಕೆಗೆ ಮತ್ತೆ ತರಲು ತೆಗೆದುಕೊಂಡಿರುವ ಕ್ರಮ ಮತ್ತು ದಾಖಲೆಗಳ ವಿವರ ಕೇಳಿದ್ದಾರೆ.

ಇಲ್ಲಿಯವರೆಗೂ ಎಎಪಿ ಪಕ್ಷ ಪಂಜಾಬಿನಲ್ಲಿ ಸುಮಾರು ೨೩ ಪಕ್ಷದ ಸದಸ್ಯರನ್ನು ಉಚ್ಛಾಟಿಸಿದ್ದು ಅವರಲ್ಲಿ ಪ್ರೋ ಮಂಜಿತ್ ಸಿಂಗ್, ಬಲದೀಪ್ ಸಿಂಗ್ ಮತ್ತು ಜ್ಯೋತಿ ಮನ್ ಕೂಡ ಸೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com