ಭೂಕಂಪನ ವದಂತಿಗಳನ್ನು ನಂಬದಂತೆ ಎಚ್ಚರಿಸಿದ ಕೇಂದ್ರ ಸರ್ಕಾರ

ಸಾಮಾಜಿಕ ಜಾಲತಾಣ ಮತ್ತು ಸಂದೇಶಗಳ ಮೂಲಕ ಹಬ್ಬಿಸಲಾಗುತ್ತಿರುವ ಭೂಕಂಪನದ ವದಂತಿಗಳನ್ನು ನಂಬದಂತೆ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್...
ರವಿಶಂಕರ್ ಪ್ರಸಾದ್
ರವಿಶಂಕರ್ ಪ್ರಸಾದ್

ನವದೆಹಲಿ: ಸಾಮಾಜಿಕ ಜಾಲತಾಣ ಮತ್ತು ಸಂದೇಶಗಳ ಮೂಲಕ ಹಬ್ಬಿಸಲಾಗುತ್ತಿರುವ ಭೂಕಂಪನದ ವದಂತಿಗಳನ್ನು ನಂಬದಂತೆ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ಎಚ್ಚರಿಸಿದ್ದು, ನೇಪಾಳದಲ್ಲಿ ಉಂಟಾದ ಅಪಾರ ಸಾವು ನೋವಿಗೆ ರಾಜ್ಯಸಭೆಯಲ್ಲಿ ಸಂತಾಪ ಸೂಚಿಸಿದ್ದಾರೆ.

"ರಾತ್ರಿ ಒಂಭತ್ತಕೆ ಅಥವಾ ರಾತ್ರಿ ೮ ಕ್ಕೆ ಭೂಕಂಪವಾಗುತ್ತದೆ ಎಂಬಂತಹ ಸಂದೇಶಗಳು ಹರಿದಾಡುತ್ತಿವೆ" ಎಂದು ರಾಜ್ಯಸಭೆಯಲ್ಲಿ ಪ್ರಸಾದ್ ತಿಳಿಸಿದ್ದಾರೆ.

"ಇಂತಹ ವದಂತಿಗಳನ್ನು ಕಡೆಗಣಿಸಿ. ಇವಕ್ಕೆ ಯಾವುದೇ ಆಧಾರಗಳಿಲ್ಲ. ಅಂತಹ ಅಧಿಕೃತ ಎಚ್ಚರಿಕೆಗಳಿದ್ದರೆ ಸರ್ಕಾರ ಕಾರ್ಯನಿರತವಾಗುತ್ತದೆ" ಎಂದು ಪ್ರಸಾದ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮುಂದಾಗಲಿರುವ ಭೂಕಂಪದ ಬಗ್ಗೆ ಸಂದೇಶಗಳು ಹರಿದಾಡುತ್ತಲೇ ಇವೆ.

ಭೂಕಂಪದಿಂದ ನೇಪಾಳದಲ್ಲಾದ ಸಾವು-ನೋವಿಗೆ ಸಂತಾಪ ಸೂಚಿಸಿರುವ ಸದಸ್ಯರು ನೇಪಾಳದ ಜನರ ರಕ್ಷಣೆಗೆ ಹಾಗು ಪರಿಹಾರ ಕಾರ್ಯಕ್ಕೆ ಭಾರತ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ರಿಕ್ಟರ್ ಮಾಪನದಲ್ಲಿ ದಾಖಲಾದ ೭.೯ ಅಂಶದ ಭೂಕಂಪನದಿಂದ ೩೬೦೦ ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ೫೦೦೦ಕ್ಕು ಹೆಚ್ಚು ಜನ ಗಾಯಗೊಂಡಿದ್ದಾರೆ. ಭೂಕಂಪನದ ನಂತರದ ಕಂಪನಗಳು ಕೂಡ ಜನರಲ್ಲಿ ಭಯಭೀತಿ ಸೃಷ್ಟಿಸಿವೆ.

ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ಪಕ್ಕದ ರಾಷ್ಟ್ರ ನೇಪಾಳದ ಜನರಿಗೆ ಅನುಕಂಪ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com