ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ೧.೫ ಲಕ್ಷ ಜನ ನಿಧನ: ಕೇಂದ್ರ ಸರ್ಕಾರ

ಪ್ರತಿ ವರ್ಷ ಸರಾರಸರಿ ೫ ಲಕ್ಷ ಅಪಘಾತಗಳಾಗುತ್ತವೆ ಮತ್ತು ಇವುಗಳಲ್ಲಿ ಸುಮಾರು ೧.೫ಲಕ್ಷ ಜನ ಸಾವನಪ್ಪುತ್ತಾರೆ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಪ್ರತಿ ವರ್ಷ ಸರಾರಸರಿ ೫ ಲಕ್ಷ ಅಪಘಾತಗಳಾಗುತ್ತವೆ ಮತ್ತು ಇವುಗಳಲ್ಲಿ ಸುಮಾರು ೧.೫ಲಕ್ಷ ಜನ ಸಾವನಪ್ಪುತ್ತಾರೆ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ.

ಈ ಅಪಘಾತಗಳಲ್ಲಿ ಶೇಕಡಾ ೭೮% 'ಚಾಲಕರ ತಪ್ಪು' ಕಾರಣ ಮತ್ತು ಚಾಲಕರಿಗೆ ಇನ್ನು ಸರಿಯಾದ ತರಬೇತಿಯ ಅವಶ್ಯಕತೆ ಇದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ರಾಜ್ಯ ಸಚಿವ ಪೋನ್ ರಾಧಾಕೃಷ್ಣ ತಿಳಿಸಿದ್ದಾರೆ.

ಸದನದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರತಿವರ್ಷ ಸರಾಸರಿ ೫ ಲಕ್ಷ ಅಪಘಾತಗಳಾಗುತ್ತವೆ ಅವುಗಳಲ್ಲಿ ಸುಮಾರು ೧.೫ ಲಕ್ಷ ಜನ ಸಾವನ್ನಪ್ಪುತ್ತಾರೆ ಹಾಗೂ ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಗಾಯಗೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಅಪಘಾತಗಳಿಂದ ಹಲವಾರು ಜನ ಪ್ರಾಣ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಎಚ್ಚರಿಕೆಯ ಕೂಗು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.

ಚಾಲಕರಿಗೆ ತರಬೇತಿ ನೀಡಲು ಸಂಸ್ಥೆಗಳನ್ನು ಸ್ಥಾಪಿಸುವ ಯಾವುದೇ ಯೋಜನೆಗಳಿದೆಯೇ ಎಂಬ ಪ್ರಶ್ನಗೆ, ರಾಧಾಕೃಷ್ಣನ್ ಅವರು ಚಾಲಕ ಪರವಾನಗಿ ನೀಡುವುದು ರಾಜ್ಯಸರ್ಕಾರ ಆದುದರಿಂದ ಇದರಲ್ಲಿ ಕೇಂದ್ರದ ಯಾವುದೇ ಪಾತ್ರವಿಲ್ಲ ಎಂದಿದ್ದಾರೆ. ಈ ಉತ್ತರ ಅನೇಕ ಸಂಸದರಲ್ಲಿ ಆಕ್ರೋಶ ಮೂಡಿಸಿ, ಕೇಂದ್ರ ಸರ್ಕಾರದ ಈ ಬೇಜವಾಬ್ದಾರಿ ಹೇಳಿಕೆ ಸರಿಯಲ್ಲ ಎಂದಿದ್ದಾರೆ.

ಇದರ ಮಧ್ಯೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, ಕೇಂದ್ರ ಮತ್ತು ರಾಜ್ಯಸರ್ಕಾರಗಳು ಒಟ್ಟಿಗೆ ಕೆಲಸ ಮಾಡುವ ಅಗತ್ಯವಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com