ವ್ಯಾಪಂ ಹಗರಣ: ೭೬ನೇ ಎಫ್ ಐ ಆರ್ ದಾಖಲು ಮಾಡಿದ ಸಿಬಿಐ

ಮಧ್ಯಪ್ರದೇಶದ ವ್ಯಾಪಂ ಹಗರಣದ ಸಂಬಂಧ ಸಿಬಿಐ ಸೋಮವಾರ ೭೬ನೇ ಎಫ್ ಐ ಆರ್ ದಾಖಲು ಮಾಡಿದೆ.
ವ್ಯಾಪಂ ಹಗರಣದ ವಿರುದ್ಧ ಪ್ರತಿಭಟನೆ (ಸಂಗ್ರಹ ಚಿತ್ರ)
ವ್ಯಾಪಂ ಹಗರಣದ ವಿರುದ್ಧ ಪ್ರತಿಭಟನೆ (ಸಂಗ್ರಹ ಚಿತ್ರ)
Updated on

ನವದೆಹಲಿ: ಮಧ್ಯಪ್ರದೇಶದ ವ್ಯಾಪಂ ಹಗರಣದ ಸಂಬಂಧ ಸಿಬಿಐ ಸೋಮವಾರ ೭೬ನೇ ಎಫ್ ಐ ಆರ್ ದಾಖಲು ಮಾಡಿದೆ.

ವ್ಯಾಪಂ ನಡೆಸಿದ್ದ ೨೦೧೩ ರ ಪೊಲೀಸ್ ಕಾಂಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ ತಪ್ಪೆಸಗಿದ್ದಾರೆ ಎಂದು ಆರೋಪಿಸಲಾಗಿರುವ ೮ ಜನರ ವಿರುದ್ದ ಈ ಹೊಸ ಅಫ್ ಐ ಆರ್ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ವ್ಯಾಪಂ ವಿರುದ್ಧ ಈಗಾಗಲೇ ೭೪ ಎಫ್ ಐ ಆರ್ ದಾಖಲಿಸಿರುವ ಸಿಬಿಐ, ೧೨ ಪ್ರಾಥಮಿಕ ತನಿಖೆಗಳನ್ನು ಕೂಡ ಪ್ರಾರಂಭಿಸಿದೆ.

ಜುಲೈ ೯ ರಂದು ಸುಪ್ರೀಮ್ ಕೋರ್ಟ್ ವ್ಯಾಪಂ ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು.

ಈ ಹಗರಣಕ್ಕೆ ಸಂಬಂಧಪಟ್ಟ ೪೦ ಜನರು ನಿಗೂಢವಾಗಿ ಸಾವನ್ನಪ್ಪಿದ್ದು ದೇಶವನ್ನು ಬೆಚ್ಚಿ ಬೀಳಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com