ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಪ್ರಕರಣ ಸಂಬಂಧ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ರಾವ್ ಅವರ ಪುತ್ರ ಅಶ್ವಿನ್ರಾವ್ ವಿರುದ್ಧ ಮಂಗಳವಾರ ಮತ್ತೊಂದು ಎಫ್ ಐಆರ್ ದಾಖಲಾಗಿದೆ. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉದಯಶಂಕರ್ ಎಂಬುವವರು ವಿಶೇಷ ತನಿಖಾ ತಂಡಕ್ಕೆ ದೂರು ನೀಡಿದ್ದಾರೆ. ದೂರಿನ ಅನ್ವಯ ಅಶ್ವಿನ್ ರಾವ್, ವಿ.ಭಾಸ್ಕರ್ ಮತ್ತು ನರಸಿಂಹ ವಿರುದ್ಧ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಅಶ್ವಿನ್ರಾವ್ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ನಾಲ್ಕಕ್ಕೇರಿವೆ. ಅಶ್ವಿನ್ ರಾವ್ ಮತ್ತು ದೂರುದಾರ ಉದಯಶಂಕರ್ ನಡುವೆ ಹಣಕಾಸಿನ ಬೆದರಿಕೆಯಲ್ಲಿ ವಿ.ಭಾಸ್ಕರ್ ಮತ್ತು ನರಸಿಂಹ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ದೂರುದಾರ ಕೆಪಿಸಿಸಿ ಸದಸ್ಯ ಮತ್ತು ಉದ್ಯಮಿ ಪಿ.ಎನ್.ಕೃಷ್ಣಮೂರ್ತಿ ನೀಡಿರುವ ದೂರಿನಲ್ಲಿಯೂ ಸಹ ವಿ.ಭಾಸ್ಕರ್ ಮತ್ತು ನರಸಿಂಹ ಹೆಸರು ಪ್ರಸ್ತಾಪವಾಗಿದೆ.
Advertisement