ನವದೆಹಲಿ: ಪಾಕಿಸ್ತಾನ ರಕ್ಷಣಾ ಸಲಹೆಗಾರ ಸತ್ರಜ್ ಅಜೀಜ್ ಅವರ ಭೇಟಿಗೆ ಕಾಶ್ಮೀರ ಪ್ರತ್ಯೇಕವಾದಿ ನಾಯಕರಿಗೆ ಆಹ್ವಾನ ನೀಡಿರುವ ನಡೆಯನ್ನು ಸಮರ್ಥಿಸಿಕೊಂಡಿರುವ ಪಾಕಿಸ್ತಾನ ರಾಯಭಾರಿ ಕಚೇರಿ ಇಂತಹ ಭೇಟಿಗಳು ಹಿಂದೆ ಕಂಡಿರದವೇನೆಲ್ಲ ಎಂದಿದೆ.
ಭಯೋತ್ಪಾದನೆ ಬಗ್ಗೆ ಚರ್ಚಿಸಲು ಆಗಸ್ಟ್ ೨೩ರಂದು ಅಜೀಜ್ ಅವರು ಭಾರತದ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗಲಿದ್ದಾರೆ. ಇದಕ್ಕೂ ಮುಂಚೆ ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಸಯ್ಯದ್ ಅಲಿ ಷಾ ಗಿಲಾನಿ ಮತ್ತಿತರಿಗೆ ಪಾಕಿಸ್ತಾನ ರಾಯಭಾರಿ ಕಚೇರಿ ಆಹ್ವಾನ ನೀಡಿತ್ತು.
"ನಾವು ಅವರನ್ನು (ಕಾಶ್ಮೀರಿ ಪ್ರತ್ಯೇಕವಾದಿಗಳು) ಆಗಾಗ ಭೇಟಿ ಮಾಡುತ್ತಲೇ ಇದ್ದೇವೆ. ಇದರಲ್ಲಿ ಹೊಸತೇನಿಲ್ಲ. ಇದರ ಸುತ್ತ ಇಷ್ಟೊಂದು ಚರ್ಚೆ ಏಕಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿ ಮಂಜೂರ್ ಅಲಿ ಮೆಮನ್ ತಿಳಿಸಿದ್ದಾರೆ.
ಪಾಕಿಸ್ತಾನ ಈ ನಡೆಗೆ ಪ್ರತಿಕ್ರಿಯಿಸಿದ್ದ ಭಾರತ ಈ ಭೇಟಿ ನಡೆದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು.
Advertisement