ಮೂವರು ಕಾರ್ಮಿಕರು ಬೇಗೂರಿನಲ್ಲಿ ವಾಸವಾಗಿದ್ದು, ಖಾಸಗಿ ಒಳಚರಂಡಿ ಸಂಸ್ಕರಣಾ ಘಟಕದಲ್ಲಿ (ಎಸ್ಟಿಪಿ) ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅಪಾರ್ಟ್ಮೆಂಟ್ನ ಗುತ್ತಿಗೆದಾರ ಉಮೇಶ್ ಇಂತಹ ಕಾರ್ಯಕ್ಕೆ ಹೊರಗಡೆಯಿಂದ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುತ್ತಿದ್ದರು. ಸೋಮವಾರ ಸಂಜೆ ಶೌಚಾಲಯದ ಘಟಕ ಸ್ವಚ್ಛ ಮಾಡಲು ಒಳಗಡೆ ಇಳಿದಾಗ ಆಮ್ಲಜನಕ ಸಿಗದೆ ಮೂವರು ಮೃತಪಟ್ಟಿದ್ದಾರೆ.