ಕಡತ ಸೋರಿಕೆ (ಸಾಂದರ್ಭಿಕ ಚಿತ್ರ)
ಪ್ರಧಾನ ಸುದ್ದಿ
ಪೆಟ್ರೋಲಿಯಂ ಸಚಿವಾಲಯದ ನೌಕರರಿಂದ ಸರ್ಕಾರಿ ಕಡತಗಳ ಸೋರಿಕೆ!
ಸರ್ಕಾರದ ಗೋಪ್ಯವಾದ ಕಡತಗಳನ್ನು ಸೋರಿಕೆ ಮಾಡಿದ ಆರೋಪದಲ್ಲಿ ಪೆಟ್ರೋಲಿಯಂ ಸಚಿವಾಲಯದ ಇಬ್ಬರು ನೌಕರರು...
ನವದೆಹಲಿ: ಸರ್ಕಾರದ ಗೋಪ್ಯವಾದ ಕಡತಗಳನ್ನು ಸೋರಿಕೆ ಮಾಡಿದ ಆರೋಪದಲ್ಲಿ ಪೆಟ್ರೋಲಿಯಂ ಸಚಿವಾಲಯದ ಇಬ್ಬರು ನೌಕರರು ಸೇರಿದಂತೆ ಇತರ ಮೂವರನ್ನು ದೆಹಲಿ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ವರದಿಗಳ ಪ್ರಕಾರ ದೆಹಲಿ ಪೊಲೀಸರು ಗುರುವಾರ ಶಾಸ್ತ್ರೀ ಭವನಕ್ಕೆ ದಾಳಿ ಮಾಡಿದ್ದು, ಆರೋಪದ ಆಧಾರದ ಮೇರೆಗೆ ಕಚೇರಿಯ ಜವಾನ ಮತ್ತು ಗುಮಾಸ್ತನನ್ನು ಬಂಧಿಸಿದ್ದಾರೆ.
ಆದಾಗ್ಯೂ, ಪೆಟ್ರೋಲಿಯಂ ಸಚಿವಾಲಯದ ಉನ್ನತ ಅಧಿಕಾರಿಗಳು ಕೂಡಾ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಬಂಧಿತ ನೌಕರರು ಆರೋಪಿಸಿದ್ದಾರೆ. ಇವರ ಹೊರತಾಗಿ ಬಂಧಿತರಾದ ಮೂವರು ವ್ಯಕ್ತಿಗಳು ಪತ್ರಕರ್ತರೆಂದು ಹೇಳಲಾಗುತ್ತಿದೆ.
ಬಂಧಿತ ವ್ಯಕ್ತಿಗಳನ್ನು ಶೀಘ್ರವೇ ವಿಚಾರಣೆಗೊಳಪಡಿಸಲಾಗುವುದು.
ವಾಣಿಜ್ಯ ವ್ಯವಹಾರ ಕೇಂದ್ರಗಳಿಗೆ ಈ ಗೋಪ್ಯ ಕಡತಗಳ ಮಾಹಿತಿಯನ್ನು ಸೋರಿಕೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ ಪೆಟ್ರೋಲಿಯಂ ಸಚಿವಾಲಯ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ