ಬರ್ಹಾಮಪುರ್: ಗಂಜಾಮ್ ಜಿಲ್ಲೆಯ ಕೃಷ್ಣಮೃಗ ನಿರ್ವಹಣಾ ಸಮಿತಿ, ಭೆತ್ನಾಯ್ ನಲ್ಲಿ ನಡೆಯಲಿರುವ ಕೃಷ್ಣಮೃಗ ಗಣತಿಗೆ ಆಹ್ವಾನ ನೀಡಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
೧೯೯೮ ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಲನಚಿತ್ರದ ಚಿತ್ರೀಕರಣದ ವೇಳೆ ಈ ಅಳಿವಿನಂಚಿನ ಪ್ರಾಣಿಯನ್ನು ಬೇಟೆಯಾಡಿದ ಆರೋಪವನ್ನು ೪೯ ವರ್ಷದ ನಟ ಸಲ್ಮಾನ್ ಖಾನ್ ಎದುರಿಸುತ್ತಿದ್ದಾರೆ.
ಸಮಿತಿಯ ಸಂಚಾಲಕ ಅಮೂಲ್ಯ ಉಪಾಧ್ಯಾಯ ಬರೆದಿರುವ ಈ ಪತ್ರದಲ್ಲಿ, ರಾಜಸ್ಥಾನದ ಬಿಶ್ನೋಯಿಸ್ ರೀತಿಯಲ್ಲೆ ಬೆಥ್ನಾಯ್ ನ ಗ್ರಾಮಸ್ಥರು ಕೃಷ್ಣಮೃಗದ ರಕ್ಷಣೆಯಲ್ಲಿ ತೊಡಗಿದ್ದಾರೆ. ಮಾರ್ಚ್ ೧ ರಂದು ಪ್ರಾದೇಶಿಕ ಅರಣ್ಯ ಅಧಿಕಾರಿಗಳ ಜೊತೆ ಸಮಿತಿ ಕೃಷ್ಣಮೃಗಗಳ ಎಣಿಕೆ ಮಾಡಲಿದ್ದು, ಈ ಗಣತಿಯನ್ನು ಮತ್ತು ಬೆಥ್ನಾಯ್ ಜನರ ಮತ್ತು ಪ್ರಾಣಿಗಳ ಸಹ ಜೀವನವನ್ನು ವೀಕ್ಷಿಸಲು ಖಾನ್ ಅವರು ಬರಬೇಕು ಎಂದು ಸಮಿತಿಯ ಸದಸ್ಯರು ಬಯಸಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರದ ಕೊನೆಗೆ, ಖಾನ್ ಅವರು ಬಂಧೂಕಿನ ಬದಲು ಕ್ಯಾಮರಾ ತರುವಂತೆ ಉಪಾಧ್ಯಾಯ ಸೂಚಿಸಿದ್ದಾರೆ.
Advertisement