ಬೆಂಗಳೂರು: ಖಾತೆ ಬದಲಾವಣೆಗಾಗಿ ಪಟ್ಟು ಹಿಡಿದು ಅಬಕಾರಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಸತೀಶ್ ಜಾರಕಿಹೊಳಿ ಅವರ ಖಾತೆಯನ್ನು ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಮಾಡಿದ್ದು, ಅವರ ಬಳಿ ಇದ್ದ ಅಬಕಾರಿ ಖಾತೆಯನ್ನು ಹಿಂಪಡೆದು ತಮ್ಮ ಬಳಿ ಇದ್ದ ಸಣ್ಣ ಕೈಗಾರಿಕಾ ಖಾತೆಯನ್ನು ದಯಪಾಲಿಸಿದ್ದಾರೆ.
ಜಾರಕಿಹೊಳಿ ಅವರ ನಿರೀಕ್ಷೆಯಂತೆ ಅವರಿಗೆ ಸಣ್ಣ ಕೈಗಾರಿಕಾ ಖಾತೆಯನ್ನು ನೀಡಿದ್ದು, ಈ ಕುರಿತು ಇಂದು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸಿಎಂ ಪತ್ರ ಬರೆದಿದ್ದಾರೆ. ಅಬಕಾರಿ ಖಾತೆಯನ್ನು ವಾಪಸ್ ಪಡೆದು, ಸತೀಶ್ ಜಾರಕಿಹೊಳಿ ಅವರಿಗೆ ಸಣ್ಣ ಕೈಗಾರಿಕಾ ಖಾತೆ ನೀಡಲಾಗಿದೆ.
ಸಮಾಜ ಕಲ್ಯಾಣ ಖಾತೆ ಕೋರಿ ಜಾರಕಿಹೊಳಿ ಅವರು ಜನವರಿ 27ರಂದು ದಿಢೀರ್ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ ಅದು ಸಿದ್ದು ಆಪ್ತರಾದ ಆಂಜನೇಯ ಅವರ ಬಳಿ ಆ ಖಾತೆ ಇದೆ. ಹೀಗಾಗಿ ಮೂರು ದಿನಗಳ ನಂತರ ಸಿಎಂ ಜಾರಕಿಹೊಳಿ ಅವರ ಮನವೊಲಿಸಿ ತಮ್ಮ ಬಳಿ ಇದ್ದ ಸಣ್ಣ ಕೈಗಾರಿಕೆ ಖಾತೆ ನೀಡುವುದಾಗಿ ಸಿದ್ದು ಭರವಸೆ ನೀಡಿದ್ದರು.
Advertisement