ರಾಷ್ಟ್ರಧ್ವಜ ವಿನ್ಯಾಸಕಾರನಿಗೆ ಗೌರವ

ವಿಜಯವಾಡ ಎ ಐ ಆರ್ ಕಟ್ಟಡವನ್ನು ಭಾನುವಾರ ...
ಭಾರತೀಯ ರಾಷ್ಟ್ರಧ್ವಜ
ಭಾರತೀಯ ರಾಷ್ಟ್ರಧ್ವಜ
Updated on

ನವದೆಹಲಿ: ವಿಜಯವಾಡ ಎ ಐ ಆರ್ ಕಟ್ಟಡವನ್ನು ಭಾನುವಾರ ಸ್ವತಂತ್ರ ಹೋರಾಟಗಾರ ಹಾಗು ಭಾರತದ ರಾಷ್ಟ್ರಧ್ವಜದ ವಿನ್ಯಾಸಕಾರ ಪಿಂಗಳಿ ವೆಂಕಯ್ಯ ಅವರ ಹೆಸರಿನಲ್ಲಿ ನಾಮಕರಣ ಮಾಡಲಾಗುವುದು.

ಇದೆ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಎಂ ವೆಂಕಯ್ಯ ನಾಯ್ಡು, ವಿಜಯವಾಡ ಎ ಐ ಆರ್ ಕಟ್ಟಡದ ಎದುರಿಗೆ ನಿರ್ಮಿಸಲಾಗಿರುವ ದಿವಂಗತ ವೆಂಕಯ್ಯ ಅವರ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ.

ಇದರ ನಂತರ ವಿಜಯವಾಡದ ಆಕಾಶವಾಣಿ ಕಟ್ಟಡ ಅಧಿಕೃತವಾಗಿ ಸ್ವತಂತ್ರಹೋರಾಟಗಾರ ಹಾಗು ಭಾರತದ ರಾಷ್ಟ್ರಧ್ವಜದ ವಿನ್ಯಾಸಕಾರ ಪಿಂಗಳಿ ವೆಂಕಯ್ಯ ಅವರ ಹೆಸರು ಪಡೆಯಲಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

ಭಾರತಕ್ಕೆ ಅಗತ್ಯವಾದ ಧ್ವಜದ ಬಗ್ಗೆ ವಕಾಲತ್ತು ವಹಿಸಿದ್ದ ವೆಂಕಯ್ಯ ಧ್ವಜ ವಿನ್ಯಾಸದೊಂದಿಗೆ ಮಹಾತ್ಮ ಗಾಂಧಿಯವರ ಬಳಿ ತೆರಳಿದ್ದರು. ಕೆಲವೇ ಬದಲಾವಣೆಗಳೊಂದಿಗೆ ಗಾಂಧಿ ಒಪ್ಪಿಗೆ ಸೂಚಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com