ಧಾರ್ಮಿಕ ಆಚರಣಾ ಪ್ರದೇಶಗಳಲ್ಲಿ ಸಿ ಸಿ ಟಿ ವಿ ಅಳವಡಿಸಿ: ದೆಹಲಿ ಪೊಲೀಸ್

ದೇವಸ್ಥಾನಗಳು, ಮಸೀದಿಗಳು, ಚರ್ಚ್ ಗಳು ಮತ್ತು ಗುರುದ್ವಾರಗಳು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ದೇವಸ್ಥಾನಗಳು, ಮಸೀದಿಗಳು, ಚರ್ಚ್ ಗಳು ಮತ್ತು ಗುರುದ್ವಾರಗಳು ಸೇರಿದಂತೆ ದೆಹಲಿಯ ಎಲ್ಲ ಧಾರ್ಮಿಕ ಆಚರಣ ಪ್ರದೇಶಗಳಲ್ಲಿ ಸಿ ಸಿ ಟಿ ವಿ ಅಳವಡಿಸಬೇಕು ಎಂದು ದೆಹಲಿಯ ಪೊಲೀಸರು ಸೂಚಿಸಿದ್ದಾರೆ. ಈ ನಡೆಯಿಂದ ಮುಂದಾಗಬಹುದಾದ ಅನಪೇಕ್ಷಿತ ಘಟನೆಗಳನ್ನು ತಡೆಯಲು ಸಹಾಯವಾಗುತ್ತದೆ ಎಂದಿದ್ದಾರೆ ಪೊಲೀಸರು.

ಈ ಧಾರ್ಮಿಕ ಆಚರಣ ಪ್ರದೇಶಗಳನ್ನು ನಡೆಸುತ್ತಿರುವ ಆಡಳಿತ ಮಂಡಲಿಗೆ ಈ ನಡಾವಳಿಯ ಸೂಚನೆಯನ್ನು ಪೋಲಿಸರು ತಲುಪಿಸಿದ್ದಾರೆ. ಡಿಸೆಂಬರ್ ೧ ರಂದು ದಿಲ್ಶಾದ್ ಗಾರ್ಡನ್ ಪ್ರದೇಶದ ಒಂದು ಪ್ರಮುಖ ಚರ್ಚ್ ನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಕ್ರಿಶ್ಚಿಯನ್ ಸಮುದಾಯ ಈ ಘಟನೆಯ ಹಿಂದೆ ಪಿತೂರಿ ಇದೆ ಎಂದು ದೂರಿದ್ದರು. ಈ ಹಿನ್ನಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು, ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲು ಈ ಸೂಚನೆ ನೀಡಲಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ ಎಸ್ ಬಸ್ಸಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com