ಹಿಂದುತ್ವ , ಮತಾಂತರ ವಿವಾದ ಎನ್ ಡಿ ಎ ಭವಿಷ್ಯಕ್ಕೆ ಮಾರಕ

ಕೇಂದ್ರ ಸರ್ಕಾರ ಎದುರಿಸುತ್ತಿರುವ ಹಿಂದುತ್ವ ವಿವಾದ ಮತ್ತು ಮತಾಂತರ ವಿವಾದಗಳು ಎನ್ಡಿಎ ಭವಿಷ್ಯಕ್ಕೆ ಮಾರಕವಾಗಲಿದೆ...
ಉಪೇಂದ್ರ ಕುಶ್ವಾಹಾ
ಉಪೇಂದ್ರ ಕುಶ್ವಾಹಾ

ನವದೆಹಲಿ: ಕೇಂದ್ರ ಸರ್ಕಾರ ಎದುರಿಸುತ್ತಿರುವ ಹಿಂದುತ್ವ ವಿವಾದ ಮತ್ತು ಮತಾಂತರ ವಿವಾದಗಳು ಎನ್ಡಿಎ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಕೇಂದ್ರ ಸಚಿವ ಉಪೇಂದ್ರ ಕುಶ್ವಾಹಾ ಹೇಳಿದ್ದಾರೆ.

ಮತಾಂತರದ ಬಗ್ಗೆ ಯಾವುದೇ ಕಾನೂನು ಇರಲಿ, ನಾನದನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ ಕುಶ್ವಾಹಾ, ಇಂಥಾ ವಿಚಾರಗಳು ಸರ್ಕಾರವನ್ನು ಅಭಿವೃದ್ಧಿ ಪಥದಿಂದ ವಿಮುಖಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸಬೇಕಿದೆ. ಅಭಿವೃದ್ಧಿಯನ್ನು ಸಾಕಾರಗೊಳಿಸಲು ಪಕ್ಷದ  ಸದಸ್ಯರು ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಸಹಕರಿಸಬೇಕಿದೆ.

ಸಮಸ್ಯೆಯೊಂದನ್ನು ಎತ್ತಿ ತೋರಿಸಲು ವಿಪಕ್ಷಗಳಿಗೆ ಆಗಾಗ್ಗೆ ಅವಕಾಶವನ್ನು ನೀಡಬಾರದು. ನಮ್ಮ ಗಮನ ಯಾವತ್ತೂ ಅಭಿವೃದ್ಧಿಯತ್ತ ಮಾತ್ರ ಇರಬೇಕು ಎಂಬುದೇ ಪ್ರಧಾನಿ ಮೋದಿಯವರ ಬಯಕೆ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ ಕುಶ್ವಾಹ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com