ಒಡಿಶಾ: ಶನಿವಾರ ಬೆಳಗ್ಗೆ ಒಡಿಶಾದಲ್ಲಿ ಮಾವೋವಾದಿಗಳು ವಿಶಾಖಪಟ್ಟಣಂ- ರಾಯ್ಪುರ್ ನಡುವಿನ ರೇಲ್ವೇ ಹಳಿ ಸ್ಫೋಟಿಸಿದರ ಪರಿಣಾಮ ಓರ್ವ ವ್ಯಕ್ತಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಇಲ್ಲಿವ ಮುನಿಗುಂಡ ರೇಲ್ವೇ ಸ್ಟೇಷನ್ ಸಮೀಪದಲ್ಲಿರುವ ಮುನಿಖೋಲ್ ಎಂಬಲ್ಲಿ ಕಡಿಮೆ ತೀವ್ರತೆಯಿರುವ ಸ್ಫೋಟಕ ಬಳಸಿ ಮಾವೋವಾದಿಗಳು ಸ್ಫೋಟ ನಡೆಸಿದ್ದಾರೆ ಎಂದು ರಾಯ್ಗಡ ಎಸ್ಪಿ ಕೆ.ಸಿಬಾಸುಬ್ರಮಣಿ ಹೇಳಿದ್ದಾರೆ.
ಈ ಸ್ಫೋಟದಲ್ಲಿ ರೈಲ್ವೇ ಗ್ಯಾಂಗ್ಮೆನ್ ಹರಿ ಮಿರ್ದಾ ಅವರು ಗಾಯಗೊಂಡಿದ್ದಾರೆ ಎಂದು ರೈಲ್ವೇ ರಕ್ಷಣಾ ಪಡೆ ಅಧಿಕಾರಿಗಳು ಹೇಳಿದ್ದಾರೆ.
ಬಾಂಬ್ ನಿಗ್ರಹ ದಳ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದು ಮಾವೋವಾದಿಗಳೇ ಈ ಕೃತ್ಯವೆಸಗಿದ್ದಾರೆಂದು ಶಂಕೆ ವ್ಯಕ್ತ ಪಡಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ರೈಲು ಸಂಚಾರಕ್ಕೆ ಅಡಚಣೆಯುಂಟಾಗಿದ್ದು ಕೆಸಿಂಗಾ, ಮುನಿಗುಂಡಾ ಮತ್ತು ರಾಯ್ಗಡ ರೈಲ್ವೇ ಸ್ಟೇಷನ್ನಲ್ಲಿ ಅರ್ಧ ಡಜನ್ನಷ್ಟು ರೈಲುಗಳನ್ನು ಸಂಚಾರ ಸ್ಥಗಿತಗೊಳಿಸಿ ನಿಲ್ಲಿಸಲಾಗಿದೆ.
ಭಾರತಕ್ಕೆ ಒಬಾಮಾ ಭೇಟಿ ನೀಡುವುದನ್ನು ವಿರೋಧಿಸಿ ಆ ಬಾಂಬ್ ಸ್ಫೋಟ ನಡೆಸಿದ್ದೇವೆ ಎಂದು ಹೇಳುವ ಬ್ಯಾನರ್ ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದು, ಸ್ಫೋಟದ ಹೊಣೆಯನ್ನು ಸಿಪಿಐ (ಮಾವೋವಾದಿ) ಸಂಘಟನೆ ಹೊತ್ತುಕೊಂಡಿದೆ.
Advertisement