ಗಣತಿ ವರದಿ ಬಿಡುಗಡೆ ಮಾಡಿದ ಕೇಂದ್ರ ಸಚಿವ ಅರುಣ್ ಜೇಟ್ಲಿ
ಗಣತಿ ವರದಿ ಬಿಡುಗಡೆ ಮಾಡಿದ ಕೇಂದ್ರ ಸಚಿವ ಅರುಣ್ ಜೇಟ್ಲಿ

ದೇಶದ ಮೊದಲ ಸಾಮಾಜಿಕ, ಆರ್ಥಿಕ, ಜಾತಿ ಗಣತಿ ಬಿಡುಗಡೆ ಮಾಡಿದ ಸರ್ಕಾರ

ಸ್ವಾತಂತ್ರ್ಯಾನಂತರ ನಡೆಸಿದ ಮೊದಲ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ವಿವರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಯಾದರೂ ಜಾತಿವಾರು ಮಾಹಿತಿಯನ್ನು ಬಿಟ್ಟಿದೆ...
Published on

ನವದೆಹಲಿ: ಸ್ವಾತಂತ್ರ್ಯಾನಂತರ ನಡೆಸಿದ ಮೊದಲ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ವಿವರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಯಾದರೂ ಜಾತಿವಾರು ಮಾಹಿತಿಯನ್ನು ಬಿಟ್ಟಿದೆ.

ಕೇವಲ ಆರ್ಥಿಕ ವಿವರವನ್ನಷ್ಟೇ ಬಹಿರಂಗಗೊಳಿಸಿದೆ. ಜಾತಿಯಾಧಾರಿತ ವಿವರ ಬಹಿರಂಗಗೊಳಿಸದಿರುವ ಸರ್ಕಾರದ ಈ ನಡೆ ಸಾಕಷ್ಟು ಕುತೂಹಲ ಹಾಗೂ ಅಚ್ಚರಿಗೆ ಕಾರಣವಾಗಿದೆ. ಬಿಹಾರ ಚುನಾವಣೆಗೆ ಹೆದರಿ ಈ ನಿರ್ಧಾರ ತೆಗೆದು ಕೊಂಡಿದೆ ಎನ್ನುವ ಆರೋಪ ಕೇಳಿಬಂದರೂ ಸರ್ಕಾರ ಮಾತ್ರ ಅದನ್ನು ತಳ್ಳಿಹಾಕಿದೆ. ಪ್ರತಿಯೊಂದನ್ನೂ ಚುನಾವಣೆ ಜತೆಗೆ ತಳಕು ಹಾಕಿ  ನೋಡುವುದು ಸರಿಯಲ್ಲ. ಸರ್ಕಾರಕ್ಕೆ ಕೇವಲ ಆರ್ಥಿಕ ವಿವರಗಳಷ್ಟೇ ಮುಖ್ಯ. ಈ ಮೂಲಕ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ಸಾಧ್ಯವಿದೆ ಎಂದು ಸಚಿವ ಚೌಧರಿ ಬಿರೇಂದ್ರ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ಈ ಗಣತಿಗೆ ಚಾಲನೆ ಸಿಕ್ಕಿದ್ದು 2011ರಲ್ಲಿ ಅಂದರೆ ಯುಪಿಎ ಅವಧಿಯಲ್ಲಿ. ಆಗ ಇದು ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಈ ಗಣತಿಯನ್ನು ಜಾತಿ ಪ್ರಧಾನವಾಗಿಯೂ ನಡೆಯ ಬೇಕು ಎಂದು  ಹಿಂದುಳಿದ ವರ್ಗಗಳ ನಾಯಕರಾದ ಮುಲಾಯಂ ಸಿಂಗ್, ಲಾಲೂ ಪ್ರಸಾದ್ ಹಾಗೂ ಶರದ್ ಯಾದವ್ ಒತ್ತಾಯಿಸಿದ್ದರು. ಈ ಮೂಲಕ ಹಿಂದುಳಿದ ವರ್ಗಗಳಿಗೆ ಸರಿಯಾದ ಲೆಕ್ಕಹಾಕಬೇಕೆಂದು  ಆಗ್ರಹಿಸಿದ್ದರು.

ಗಣತಿಯ ಪ್ರಮುಖ ಅಂಶಗಳು
*ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿರುವ ಒಟ್ಟಾರೆ ಕುಟುಂಬಗಳು 24.39 ಕೋಟಿ ದೇಶದಲ್ಲಿರುವ 24.39 ಕೋಟಿ ಕುಟುಂಬದಲ್ಲಿ 17.91 ಕೋಟಿ ಕುಟುಂಬ ಗ್ರಾಮಗಳಲ್ಲೇ ಇವೆ.
*ಶೇ.20.69ರಷ್ಟು ಕುಟುಂಬಗಳು ವಾಹನ ಅಥವಾ ಬೋಟ್ ಹೊಂದಿವೆ.
*ಶೇ.94ರಷ್ಟು ಹಳ್ಳಿ ಕುಟುಂಬಗಳು ಸ್ವಂತ ಮನೆ ಹೊಂದಿವೆ. ಇವುಗಳಲ್ಲಿ ಶೇ.54ರಷ್ಟು ಕುಟುಂಬ 1 ಅಥವಾ 2 ಕೋಣೆ ಮನೆಯಲ್ಲಿ ವಾಸಿಸುತ್ತವೆ.
*ಶೇ.70ರಷ್ಟು ಎಸ್ಸಿಗಳು ಹಾಗೂ ಶೇ. 50ರಷ್ಟು ಎಸ್ಟಿ ಸಮುದಾಯಕ್ಕೆ ಸೇರಿದವರಿಗೆ ಸ್ವಂತ ಭೂಮಿ ಇಲ್ಲ.
*ಗ್ರಾಮೀಣ ಪ್ರದೇಶದ ಶೇ.4.6ರಷ್ಟು ಕುಟುಂಬಗಳು ತೆರಿಗೆ ಪಾವತಿಸುತ್ತವೆ.
*2.37 ಕೋಟಿ ಗ್ರಾಮೀಣ ಕುಟುಂಬಗಳು ಒಂದೇ ಕೋಣೆಯ ಮನೆಯಲ್ಲಿ ವಾಸಿಸುತ್ತಿವೆ.
*ಇವು ಕಚ್ಚಾಮನೆಗಳಾಗಿವೆ. ಶೇ.11ರಷ್ಟು ಗ್ರಾಮೀಣ ಕುಟುಂಬಗಳು ಫ್ರಿಡ್ಜ್ ಹೊಂದಿವೆ.
*ದೇಶದ 10.69 ಕೋಟಿ ಕುಟುಂಬಗಳು ಹಿಂದುಳಿದಿವೆ.
*ಗ್ರಾಮೀಣ ಪ್ರದೇಶದಲ್ಲಿ ಶೇ.30ರಷ್ಟು ಎಸ್ಸಿ,ಎಸ್ಟಿ ಕುಟುಂಬಗಳು ವಾಸಿಸುತ್ತಿವೆ.

ಇದೊಂದು ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿದ ನಿಖರ ವರದಿಯಾಗಿದೆ. ರಾಜ್ಯ ಸರ್ಕಾರಗಳು ಹಾಗೂ ಇತರೆ ಇಲಾಖೆಗಳು ಸರ್ಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಈ ವಿವರವನ್ನು ಬಳಸಿಕೊಳ್ಳಬಹುದಾಗಿದೆ.
-ಚೌಧರಿ ಬಿರೇಂದ್ರ ಸಿಂಗ್, ಗ್ರಾಮೀಣಾಭಿವೃದ್ಧಿ ಸಚಿವ

ಸರ್ಕಾರಿ ಯೋಜನೆಗಳನ್ನು ಯಾರಿಗಾಗಿ ಜಾರಿ ಮಾಡಬೇಕು ಎನ್ನುವುದನ್ನು ನಿರ್ಧರಿಸಲು ಈ ಮಾಹಿತಿಗಳು ನೆರವು ನೀಡಲಿವೆ.
-ಅರುಣ್ ಜೇಟ್ಲಿ, ಕೇಂದ್ರ ಹಣಕಾಸು ಸಚಿವ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com