ಅಸಾರಂ ಲೈಂಗಿಕ ದೌರ್ಜನ್ಯ ಪ್ರಕರಣದ ಸಾಕ್ಷಿದಾರನಿಗೆ ಗುಂಡು

ಸ್ವಘೋಷಿತ ದೇವಮಾನವ ಅಸಾರಂ ಬಾಪು ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿಗೆ ಕಳೆದ ರಾತ್ರಿ ಷಹಜಹಾನ್ಪುರದಲ್ಲಿ ಗುರುತು ಹಚ್ಚದ
ಬಂಧನದಲ್ಲಿರುವ ಸ್ವಘೋಷಿತ ದೇವಮಾನವ ಅಸಾರಂ ಬಾಪು
ಬಂಧನದಲ್ಲಿರುವ ಸ್ವಘೋಷಿತ ದೇವಮಾನವ ಅಸಾರಂ ಬಾಪು

ಷಹಜಹಾನ್ಪುರ: ಸ್ವಘೋಷಿತ ದೇವಮಾನವ ಅಸಾರಂ ಬಾಪು ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿಗೆ ಕಳೆದ ರಾತ್ರಿ ಷಹಜಹಾನ್ಪುರದಲ್ಲಿ ಗುರುತು ಹಚ್ಚದ ಇಬ್ಬರು ಬಂದೂಕಿನಿಂದ ಗುಂಡು ಹೊಡೆದ ಘಟನೆ ನಡೆದಿದೆ.

ಸಾಕ್ಷಿದಾರ ರಾಮ್ ಕೃಪಾಲ್ ಅವರು ಮಾರುಕಟ್ಟೆಯಿಂದ ಮನೆಗೆ ಹೋಗಬೇಕಾದರೆ ಈ ಘಟನೆ ನಡೆದಿದೆ.

"ರಾಮ್ ಕೃಪಾಲ್ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು ಅವರನ್ನು ಪ್ರಾಥಮಿಕ ಚಿತ್ಸೆಗಾಗಿ ಜಿಲ್ಲಾ ಆಸ್ಪತ್ರಗೆ ಸೇರಿಸಲಾಗಿದೆ. ಅಲ್ಲಿಂದ ಅವರನ್ನು ಬರೇಲಿಗೆ ಕೊಂಡೊಯ್ಯಲಾಗಿದೆ. ತನಿಖೆ ಪ್ರಗತಿಯಲ್ಲಿದೆ" ಎಂದು ಷಹಜಹಾನ್ಪುರದ ಪೋಲಿಸ್ ಆಯುಕ್ತ ಬಬ್ಲು ಕುಮಾರ್ ತಿಳಿಸಿದ್ದಾರೆ.

ಈ ಅಪರಾಧದಲ್ಲಿ ಭಾಗಿಯಾದವರ ವಿದ್ರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com