ಷಹಜಹಾನ್ಪುರ: ಸ್ವಘೋಷಿತ ದೇವಮಾನವ ಅಸಾರಂ ಬಾಪು ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿಗೆ ಕಳೆದ ರಾತ್ರಿ ಷಹಜಹಾನ್ಪುರದಲ್ಲಿ ಗುರುತು ಹಚ್ಚದ ಇಬ್ಬರು ಬಂದೂಕಿನಿಂದ ಗುಂಡು ಹೊಡೆದ ಘಟನೆ ನಡೆದಿದೆ.
ಸಾಕ್ಷಿದಾರ ರಾಮ್ ಕೃಪಾಲ್ ಅವರು ಮಾರುಕಟ್ಟೆಯಿಂದ ಮನೆಗೆ ಹೋಗಬೇಕಾದರೆ ಈ ಘಟನೆ ನಡೆದಿದೆ.
"ರಾಮ್ ಕೃಪಾಲ್ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು ಅವರನ್ನು ಪ್ರಾಥಮಿಕ ಚಿತ್ಸೆಗಾಗಿ ಜಿಲ್ಲಾ ಆಸ್ಪತ್ರಗೆ ಸೇರಿಸಲಾಗಿದೆ. ಅಲ್ಲಿಂದ ಅವರನ್ನು ಬರೇಲಿಗೆ ಕೊಂಡೊಯ್ಯಲಾಗಿದೆ. ತನಿಖೆ ಪ್ರಗತಿಯಲ್ಲಿದೆ" ಎಂದು ಷಹಜಹಾನ್ಪುರದ ಪೋಲಿಸ್ ಆಯುಕ್ತ ಬಬ್ಲು ಕುಮಾರ್ ತಿಳಿಸಿದ್ದಾರೆ.
ಈ ಅಪರಾಧದಲ್ಲಿ ಭಾಗಿಯಾದವರ ವಿದ್ರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
Advertisement