ನವದೆಹಲಿ: ರಾಜಧಾನಿ ದೆಹಲಿಯಲ್ಲಿ ರಸ್ತೆ ಬದಿ ವ್ಯಾಪಾರಿಗಳನ್ನು ಭೇಟಿ ಮಾಡಿ ಅವರ ಕಷ್ಟ ಸುಖ ವಿಚಾರಿಸಿಕೊಂಡ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟೀಕಿಸಿರುವ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ, ಇದು 'ಅಲ್ಪಾವಧಿ ರಾಜಕಾರಣಿ'ಯಿಂದ 'ಅಲ್ಪಾವಧಿ ರಾಜಕೀಯ ನಾಟಕ' ಎಂದು ಟೀಕಿಸಿದ್ದಾರೆ.
"ಇದು 'ಅಲ್ಪಾವಧಿ ರಾಜಕಾರಣಿ'ಯಿಂದ 'ಅಲ್ಪಾವಧಿ ರಾಜಕೀಯ ನಾಟಕ'. ಇದು ದೇಶದ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ನಡೆಸಿರುವ ಚಟುವಟಿಕೆಯಲ್ಲ. ನಾವು ಭಾರತೀಯ ಜನತಾ ಪಕ್ಷ ರಸ್ತೆ ಬದಿ ವ್ಯಾಪಾರಿಗಳು ಮತ್ತು ತಳ್ಳು ವ್ಯಾಪಾರಿಗಳ ಖಾಯಂ ಅಭಿವೃದ್ಧಿ ಮತ್ತು ಅಭ್ಯುಧಯಕ್ಕಾಗಿ ನೀತಿಗಳನ್ನು ಮಾಡಿದ್ದೇವೆ. ಅವರ ತೊಂದರೆಗಳನ್ನು ನಿವಾರಿಸಲು ಪ್ರಯತ್ನಿಸಿದ್ದೇವೆ. ಅವರಿಗೆ ಈ ವಿಷಯಗಳು ತಿಳಿದಿಲ್ಲ, ಆದುದರಿಂದ ಅವರದ್ದು ಅಲ್ಪಾವಧಿ ರಾಜಕೀಯ ನಾಟಕ" ಎಂದು ನಕ್ವಿ ಹೇಳಿದ್ದಾರೆ.
ದೆಹಲಿಯ ರಘುಬೀರ್ ನಗರದಲ್ಲಿ ರಸ್ತೆಬದಿಯ ವ್ಯಾಪಾರಿಗಳನ್ನು ಭೇಟಿ ಮಾಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಬಡಜನರನ್ನು ದೆಹಲಿಯಲ್ಲಿ ಕಡೆಗಣಿಸಲಾಗಿದೆ ಮತ್ತು ಅವರನ್ನು ಹೊರದಬ್ಬಲಾಗುತ್ತಿದೆ ಎಂದು ಆರೋಪಿಸಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಜಯ್ ಮಾಕೆನ್ ಮತ್ತು ಪಿ ಸಿ ಚ್ಯಾಕೋ ರಾಹುಲ್ ಜೊತೆಗಿದ್ದರು.
Advertisement