ಮುಸ್ಲಿಮರ ಮತಕ್ಕಾಗಿ ಬಿಜೆಪಿ ಕಲಾಮ್ ಗೆ ರಾಷ್ಟ್ರಾಧ್ಯಕ್ಷ ಪಟ್ಟ ನೀಡಿತ್ತು: ಪಾಕ್ ವಿಜ್ಞಾನಿಯ ಕೊಂಕು

ಭಾರತದ 'ಮಿಸ್ಸೈಲ್ ಮನುಷ್ಯ' ಎಂದೇ ಖ್ಯಾತರಾಗಿದ್ದ, ಮಾಜಿ ರಾಷ್ಟ್ರಪತಿ ದಿವಂಗತ ಎ ಪಿ ಜೆ ಅಬ್ದುಲ್ ಕಲಾಮ್ ಬಗ್ಗೆ ಅಪಸ್ವರ ನುಡಿದಿರುವ ಪಾಕಿಸ್ತಾನ ವಿಜ್ಞಾನಿ ಮತ್ತು ಅಣು
ಪಾಕಿಸ್ತಾನ ವಿಜ್ಞಾನಿ ಮತ್ತು ಅಣು ಭೌತಶಾಸ್ತ್ರಜ್ಞ ಅಬ್ದುಲ್ ಖಾದಿರ್ ಖಾನ್
ಪಾಕಿಸ್ತಾನ ವಿಜ್ಞಾನಿ ಮತ್ತು ಅಣು ಭೌತಶಾಸ್ತ್ರಜ್ಞ ಅಬ್ದುಲ್ ಖಾದಿರ್ ಖಾನ್
Updated on

ಭಾರತದ 'ಕ್ಷಿಪಣಿ ರುವಾರಿ' ಎಂದೇ ಖ್ಯಾತರಾಗಿದ್ದ, ಮಾಜಿ ರಾಷ್ಟ್ರಪತಿ ದಿವಂಗತ ಎ ಪಿ ಜೆ ಅಬ್ದುಲ್ ಕಲಾಮ್ ಬಗ್ಗೆ ಅಪಸ್ವರ ನುಡಿದಿರುವ ಪಾಕಿಸ್ತಾನ ವಿಜ್ಞಾನಿ ಮತ್ತು ಅಣು ಭೌತಶಾಸ್ತ್ರಜ್ಞ ಅಬ್ದುಲ್ ಖಾದಿರ್ ಖಾನ್, ಕಲಾಮ್ ಅವರೊಬ್ಬ ಸಾಧಾರಣ ವಿಜ್ಞಾನಿ ಎಂದಿದ್ದಾರೆ.

ಪಾಕಿಸ್ತಾನದ ಅಣು ಬಾಂಬಿಗೆ ಅಪಾರ ಕೊಡುಗೆಗೆ ಹೆಸುರುವಾಸಿಯಾಗಿರುವ ಅಬ್ದುಲ್ ಖಾದಿರ್ ಖಾನ್ ಅವರು ಬಿಬಿಸಿಗೆ ಇತ್ತೀಚೆಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಡಾ. ಕಲಾಮ್ ಅವರ ಯಾವುದೇ ಅತಿ ದೊಡ್ಡ ಸಂಶೋಧನೆ ನೆನಪಿಗೆ ಬರುತ್ತಿಲ್ಲ ಎಂದು ಖಾನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಸೋವವಾರ ದಿವಂಗತರಾದ ಡಾ. ಕಲಾಮ್ ಅವರು ಸರಳ ಜೀವನದಲ್ಲಿ ನಂಬಿಕೆ ಇಟ್ಟವರು ಹಾಗೆಯೇ ಅವರು ಸಾಧಾರಣ ವಿಜ್ಞಾನಿ ಎಂದಿದ್ದಾರೆ.

ಅಲ್ಲದೆ ಭಾರತದ ಮಿಸ್ಸೈಲ್ ಯೋಜನೆ ಕಾರ್ಯಗತವಾದದ್ದು ರಷ್ಯಾ ದೇಶದ ಸಹಾಯದಿಂದ ಮಾತ್ರ ಎಂದು ಕೂಡ ಅವರು ಆರೋಪಿಸಿದ್ದಾರೆ.

ಭಾರತೀಯ ಜನತಾ ಪಕ್ಷ ಮುಸ್ಲಿಂ ಮತ ಬ್ಯಾಂಕಿನ ಮೇಲೆ ಕಣ್ಣಿಟ್ಟು ೨೦೦೨ರಲ್ಲಿ ಅಬ್ದುಲ್ ಕಲಾಮ್ ಅವರನ್ನು ರಾಷ್ಟ್ರಾಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು ಎಂಬ ಅವರ ಹೇಳಿಕೆ ವಿವಾದಾತ್ಮಕ ರೂಪ ಪಡೆದು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com