ನಾಗಪುರ: ಗುರುವಾರ ಬೆಳಗ್ಗೆ ನೇಣುಗಂಬಕ್ಕೆ ಏರಿಸಲಾದ ಮುಂಬೈ ಸರಣಿ ಸ್ಫೋಟದ ಆರೋಪಿ ಯಾಕೂಬ್ ಮೆಮನ್ ನ ದೇಹವನ್ನು ಅವರ ಕುಟುಂಬದ ವಶಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮೊದಲು ಅಧಿಕಾರಿಗಳು ಕುಟುಂಬ ವಶಕ್ಕೆ ನೀಡದೆ ಜೈಲಿನ ಆವರಣದಲ್ಲೇ ಅಂತಿಮ ವಿಧಿಯನ್ನು ನಡೆಸಲು ನಿರ್ಧರಿಸಿದ್ದರು.
ಆದರೆ ಯಾಕೂಬ್ ನನ್ನು ಗಲ್ಲಿಗೇರಿಸಿದ ನಂತರ, ಕುಟುಂಬ ಅಂತಿಮ ವಿಧಿಗಳನ್ನು ಮುಂಬೈನಲ್ಲಿ ನೆರವೇರಿಸಲು ಅನುವು ಮಾಡಿಕೊಡಲು ದೇಹವನ್ನು ವಶಕ್ಕೆ ನೀಡುವಂತೆ ಮೆಮನ್ ಸಹೋದರ ಸುಲೈಮಾನ್ ಜೈಲು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಕೂಡಲೆ ವಿಚಾರಣೆ ಮಾಡಿ, ಕಠಿಣ ಷರತ್ತುಗಳೋಂದಿಗೆ ಅನುಮತಿ ನೀಡಿ ದೇಹವನ್ನು ವಶಕ್ಕೆ ನೀಡಲಾಗಿದೆ.
ದೇಹವನ್ನು ನಾಗಪುರ ವಿಮಾನ ನಿಲ್ದಾಣದಿಂದ ವೈಮಾನಿಕ ಆಂಬ್ಯುಲೆನ್ಸ್ ಮೂಲಕ ಮುಂಬೈಗೆ ಗುರುವಾರ ಸಂಜೆ ಕೊಂಡೊಯ್ಯಲಾಗುವುದು.
ಈ ಹಿಂದೆ ದೆಹಲಿ ಸಂಸತ್ತಿನ ದಾಳಿಯ ತಪ್ಪಿತಸ್ಥ ಅಪ್ಜಲ್ ಗುರುವಿನ ದೇಶವನ್ನು ಕುಟುಂಬ ವಶಕ್ಕೆ ನೀಡದೆ ತಿಹಾರ್ ಜೈಲಿನಲ್ಲಿ ಮಣ್ಣುಮಾಡಲಾಗಿತ್ತು.
Advertisement