ಆಂಧ್ರದಲ್ಲಿ ಭೀಕರ ದುರಂತ: ಒಂದೇ ಕುಟುಂಬದ 22 ಮಂದಿ ದುರ್ಮರಣ

ಆಯ ತಪ್ಪಿ ಕ್ರೂಸೆರ್ ಗೋದಾವರಿ ನದಿಗೆ ಬಿದ್ದ ಪರಿಣಾಮ ಒಂದೇ ಕುಟುಂಬದ 22 ಮಂದಿ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಆಂದ್ರಪ್ರದೇಶದ...
ಗೋಧಾವರಿ ನದಿಗೆ ಉರುಳಿದ ಕ್ರ್ಯೂಸೆರ್
ಗೋಧಾವರಿ ನದಿಗೆ ಉರುಳಿದ ಕ್ರ್ಯೂಸೆರ್

ರಾಜಮಂಡ್ರಿ: ಆಯ ತಪ್ಪಿ ಕ್ರೂಸೆರ್ ಗೋದಾವರಿ ನದಿಗೆ ಬಿದ್ದ ಪರಿಣಾಮ ಒಂದೇ ಕುಟುಂಬದ 22 ಮಂದಿ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಆಂದ್ರಪ್ರದೇಶದ ರಾಜಮಂಡ್ರಿ ಯಲ್ಲಿ ನಡೆದಿದೆ.

ಮೃತರೆಲ್ಲರೂ ವಿಶಾಖಪಟ್ಟಣಂನ ಅಚ್ಯುತಾಪುರಂ ನಿವಾಸಿಗಳು ಎಂದು ಗುರುತಿಸಲಾಗಿದೆ. ಕ್ಯೂಸೆರ್ ನಲ್ಲಿ ಮಕ್ಕಳು ಸೇರಿ ಒಂದೇ ಕುಟುಂಬದ 23 ಮಂದಿ ಪ್ರಯಾಣಿಸುತ್ತಿದ್ದರು.
ದುರ್ಗಮ್ಮ ದೇವಿ ದರ್ಶನ ಪಡೆದು ವಿಜಯವಾಡದಿಂದ ಅಚ್ಯುತಾಪುರಂಗೆ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಧವಳೇಶ್ವರ ಬ್ಯಾರೇಜ್ ನಿಂದ ಕ್ರ್ಯೂಸರ್ ಗೋದಾವರಿ ನದಿಗೆ ಉರುಳಿದ್ದು, 22 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ, ಇಬ್ಬರು ಮಕ್ಕಳು ಮಾತ್ರ ಆಶ್ಚರ್ಯ ರೀತಿಯಲ್ಲಿ ಪಾರಾಗಿದ್ದಾರೆ. ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com