ಪಕ್ಷದಲ್ಲಿನ ಬೆಳವಣಿಗೆಯಿಂದ ನೋವಾಗಿದೆ: ಅರವಿಂದ್ ಕೇಜ್ರಿವಾಲ್

ಪಕ್ಷದಲ್ಲಿ ಉದ್ಭವಿಸಿರುವ ಭಿನ್ನಮತದಿಂದ ಬಹಳ ನೋವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಹಾಗು ದೆಹಲಿ ಮುಖ್ಯಮಂತ್ರಿ ಅರವಿಂದ್
ಪಕ್ಷದಲ್ಲಿನ ಬೆಳವಣಿಗೆಯಿಂದ ನೋವಾಗಿದೆ: ಅರವಿಂದ್ ಕೇಜ್ರಿವಾಲ್

ನವದೆಹಲಿ: ಪಕ್ಷದಲ್ಲಿ ಉದ್ಭವಿಸಿರುವ ಭಿನ್ನಮತದಿಂದ ಬಹಳ ನೋವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಹಾಗು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

"ಪಕ್ಷದಲ್ಲಿನ ಬೆಳವಣಿಗೆಗಳನ್ನು ಕಂಡು ನನಗೆ ಅಘಾತವಾಗಿವೆ ಮತ್ತು ಅತ್ಯಂತ ಹೆಚ್ಚು ನೋವಾಗಿದೆ. ದೆಹಲಿ ನಮಗೆ ಕೊಟ್ಟ ಅವಕಾಶಕ್ಕೆ ಬಗೆಯುತ್ತಿರುವ ದ್ರೋಹ ಇದು" ಎಂದು ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.


"ಈ ಕೆಟ್ಟ ಜಗಳದಲ್ಲಿ ಸೇರಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ದೆಹಲಿಯಲ್ಲಿನ ಆಡಳಿತದ ಬಗ್ಗೆಯಷ್ಟೇ ನಾನು ಗಮನ ಹರಿಸುತ್ತೇನೆ" ಎಂದು ಕೂಡ ತಿಳಿಸಿದ್ದಾರೆ.

ಏಕ ವ್ಯಕ್ತಿ ಕೇಂದ್ರ ಆಡಳಿತ ಶೈಲಿಯ ಬಗ್ಗೆ ಪಕ್ಷದ ಹಿರಿಯ ಮುಖಂಡರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಪ್ರಶ್ನಿಸಿದ್ದರು. ಈ ಇಬ್ಬರೂ ಮುಖಂಡರನ್ನು ಉನ್ನತ ಸಮಿತಿಯಿಂದ ಹೊರಹಾಕುವ ಪ್ರಯತ್ನವೂ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com