ಆಪ್ ಪಕ್ಷ ಮುಗಿಯಿತು ಎನ್ನಬೇಡಿ: ಯೋಗೇಂದ್ರ ಯಾದವ್

ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ(ಪಿಎಸಿ) ಹೊರದೂಡಲ್ಪಟ್ಟ ಮೇಲೆ ಮಾತನಾಡಿರುವ ಆಪ್ ಮುಖಂಡ ಯೋಗೇಂದ್ರ ಯಾದವ್,
ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್

ನವದೆಹಲಿ: ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ(ಪಿಎಸಿ) ಹೊರದೂಡಲ್ಪಟ್ಟ ಮೇಲೆ ಮಾತನಾಡಿರುವ ಆಪ್ ಮುಖಂಡ ಯೋಗೇಂದ್ರ ಯಾದವ್, ಪಕ್ಷದಲ್ಲಿ ಪಾರದರ್ಶಕತೆ ಇಲ್ಲ ಎಂಬುವುದನ್ನು ನಾನು ಒಪ್ಪಿಕೊಳುವುದಿಲ್ಲ ಎಂದಿದ್ದಾರೆ.

"ನನ್ನನ್ನು ಮತ್ತು ಪ್ರಶಾಂತ್ ಭೂಷಣ್ ಅವರನ್ನು ಪಿಎಸಿಯಿಂದ ಹೊರಹಾಕಿರುವುದು ಅಂತ ಮಹತ್ವದ ಘಟನೆ ಏನಲ್ಲ. ಆಪ್ ಪಕ್ಷಕ್ಕೆ ಇನ್ನು ಭವಿಷ್ಯವಿದೆ" ಎಂದು ಟತ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

"ನಮ್ಮೆಲ್ಲರಿಂಗಿತ ದೊಡ್ಡದು ಆಪ್ ಪಕ್ಷ. ನೆನ್ನೆಯ ಸಭೆಯಲ್ಲಿ ಯಾವ ಚೌಕಾಸಿಯು  ನಡೆದಿಲ್ಲ. ಆಪ್ ಪಕ್ಷ ಮುಗಿಯಿತು ಎನ್ನಬೇಡಿ ಮತ್ತು ಇತರ ಪಕ್ಷಗಳಿಗೂ ಆಪ್ ಪಕ್ಷಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದುಕೊಳ್ಳಬೇಡಿ" ಎಂದಿದ್ದಾರೆ.

ನೆನ್ನೆ ಸಭೆಯಲ್ಲಿದ್ದ ಆಪ್ ಪಕ್ಷದ ಮಾಯಾಂಕ್ ಗಾಂಧಿ ಈ ಮೊದಲು ತಮ್ಮ ಬ್ಲಾಗಿನಲ್ಲಿ, ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಶಾಂತ್ ಮತ್ತು ಯೋಗೇಂದ್ರ ಪಿಎಸಿಯಲ್ಲಿರುವುದು ಇಷ್ಟವಿರಲಿಲ್ಲ ಎಂದು ದಾಖಲಿಸಿದ್ದರು ಹಾಗು ಇದರ ಬಗ್ಗೆ ಪಕ್ಷವನ್ನು ಪ್ರಶ್ನಿಸಿದ್ದರು.

ಇದರ ಬಗ್ಗೆ ಕೇಳಿದ ಪ್ರಶ್ನೆಗೆ "ಕೊನೆಗೆ ಸತ್ಯ ಉಳಿಯುತ್ತದೆ" ಎಂದಷ್ಟೇ ಯೋಗೇಂದ್ರ ಯಾದವ್ ಉತ್ತರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com