ತಮಿಳು ಟಿವಿ ವಾಹಿನಿ ಕಚೇರಿಗೆ ಕಚ್ಚಾ ಬಾಂಬ್ ಎಸೆತ

ಚನ್ನೈನ ಪ್ರಖ್ಯಾತ ಟಿವಿ ವಾಹಿನಿಯೊಂದರ ಕಚೇರಿಗೆ ಪತ್ತೆ ಹಚ್ಚದ ವ್ಯಕ್ತಿಗಳು ಕಚ್ಚಾ ಬಾಂಬ್ ಗಳನ್ನು ಎಸೆದ ಘಟನೆ ನಡೆದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಚನ್ನೈನ ಪ್ರಖ್ಯಾತ ಟಿವಿ ವಾಹಿನಿಯೊಂದರ ಕಚೇರಿಗೆ ಪತ್ತೆ ಹಚ್ಚದ ವ್ಯಕ್ತಿಗಳು ಕಚ್ಚಾ ಬಾಂಬ್ ಗಳನ್ನು ಎಸೆದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ.

ಇದು ಮುಂಜಾನೆ ನಡೆದ ಘಟನೆಯಲ್ಲಿ ಬೈಕುಗಳಲ್ಲಿ ಬಂದ ನಾಲ್ಕು ಜನ ಯುವಕರು ಊಟದ ಡಬ್ಬಿಯಲ್ಲಿ ಕಚ್ಚಾ ಬಾಂಬುಗಳನ್ನಿಟ್ಟು ಕಚೇರಿಯೊಳಗೆ ಎಸೆದಿದ್ದಾರೆ.

ಪೊಲೀಸರು ಸುಳುಹುಗಳ ಬೆನ್ನುಹತ್ತಿದ್ದು, ಇನ್ನು ಯಾರನ್ನು ಬಂಧಿಸಲಾಗಿಲ್ಲ.

ಈ ಘಟನೆಯಿಂದ ಯಾರಿಗೂ ಹಾನಿಯಾಗಿಲ್ಲ ಹಾಗೆಯೇ ಆಸ್ತಿ-ಪಾಸ್ತಿಗೂ ಹೆಚ್ಚಿನ ತೊಂದರೆಯಾಗಿಲ್ಲ ಎಂದು ಪುಥಿಯ ಥಲೈಮುರೈ ಟಿವಿ ವಾಹಿನಿಯ ಪತ್ರಕರ್ತರು ತಿಳಿಸಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದು ಮುನ್ನಾನಿ ಎಂಬ ಹಿಂದು ಸಂಘಟನೆ ಈ ವಾಹಿನಿ ನಡೆಸುತ್ತಿದ್ದ ವಿವಾದಾತ್ಮಕ ಕಾರ್ಯಕರ 'ತಾಳಿ'ಯನ್ನು ಭಾನುವಾರ ವಿರೋಧಿಸಿ ಪತ್ರಕರ್ತ ಛಾಯಾಗ್ರಾಹಕನೊಬ್ಬನ  ಮೇಲೆ ಹಲ್ಲೆ ಮಾಡಿದ್ದರಿಂದ ವಾಹಿನಿ ಈ ಕಾರ್ಯಕ್ರಮವನ್ನು ಹಿಂದಕ್ಕೆ ತೆಗೆದುಕೊಂಡಿತ್ತು. ಈ ಹಿನ್ನಲೆಯಲ್ಲೇ ಈ ಘಟನೆ ನಡೆದಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com