ಡಿ.ಕೆ.ರವಿ ನಿಗೂಢ ಸಾವು ಪ್ರಕರಣ: ಸಿಬಿಐ ತನಿಖೆಗೆ ಕುಟುಂಬ ಸ್ವಾಗತ

ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿರುವ ರಾಜ್ಯ ಸರ್ಕಾರ ಕ್ರಮವನ್ನು ಕುಟುಂಬ ಸ್ವಾಗತಿಸಿದೆ...
ಡಿ.ಕೆ.ರವಿ ಕುಟುಂಬದೊಂದಿಗೆ ಸಿಎಂ
ಡಿ.ಕೆ.ರವಿ ಕುಟುಂಬದೊಂದಿಗೆ ಸಿಎಂ

ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿರುವ ರಾಜ್ಯ ಸರ್ಕಾರ ಕ್ರಮವನ್ನು ಕುಟುಂಬ ಸ್ವಾಗತಿಸಿದೆ.

ತಮ್ಮ ಮಗನ ಸಾವು ಆತ್ಮಹತ್ಯೆಯಲ್ಲ, ಇದೊಂದು ಕೊಲೆ ಎಂದಿದ್ದ ಕುಟುಂಬ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿತ್ತು.

'ನನ್ನ ಮಗ ಈ ದೇಶದ ಮಗ. ಆತ ಈ ದೇಶಕ್ಕಾಗಿ ಹೋರಾಡಿದ್ದಾನೆ. ಅವನು ನನಗೆಷ್ಟೇ ಮಗ ಅಲ್ಲ, ಈ ದೇಶದ ಮಗ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೆ ಮಾತ್ರ ಆತನ ಆತ್ಮ ಶಾಂತಿ ಸಿಗುತ್ತದೆ' ಎಂದು ರವಿ ಅವರ ತಾಯಿ ಗೌರಮ್ಮ ಹೇಳಿದ್ದಾರೆ.

'ನನ್ನ ಮಗನ ಸಾವಿನ ಸತ್ಯ ಹೊರ ಬರಬೇಕು. ಆಗಲೇ ಆತನ ಆತ್ಮಕ್ಕೆ ಶಾಂತಿ ಸಿಗುತ್ತದೆ. ಸಿಬಿಐ ನಮಗೆ ನ್ಯಾಯ ಕೊಡಿಸಬೇಕು. ಆತನ ಪ್ರಮಾಣಿಕ ಕೆಲಸದ ಬಗ್ಗೆ ಜನತೆಗೆ ಗೊತ್ತು' ಎಂದು ಹೇಳಿದ್ದಾರೆ.

ಮಾರ್ಚ್ 16ರಂದು ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಡಿ.ಕೆ.ಪ್ರಕರಣವನ್ನು ಸಿಬಿಐ ಒಪ್ಪಿಸಬೇಕು ಎಂದು ಕುಟುಂಬ ಸೇರಿದಂತೆ ಪ್ರತಿಪಕ್ಷಗಳು ಹಾಗೂ ರಾಜ್ಯದ್ಯಾಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಕಡೆಗೂ ಪ್ರತಿಭಟನೆಗೆ ಮಣಿದ ಕಾಂಗ್ರೆಸ್ ಸರ್ಕಾರ ಪ್ರಕರವನ್ನು ಇಂದು ಸಿಬಿಐಗೆ ಹಸ್ತಾಂತರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com