ಉಳಿದಿದ್ದನ್ನು ದೇವರಿಗೆ ಬಿಡುತ್ತೇವೆ: ಸಲ್ಮಾನ್ ತಂಗಿ ಅರ್ಪಿತಾ

ಕುಟುಂಬದ ಕಷ್ಟದ ಸಮಯದಲ್ಲಿ ತಮ್ಮ ಜೊತೆಗಿದ್ದ ಎಲ್ಲ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ಅರ್ಪಿತಾ ಖಾನ್,
ಸಲ್ಮಾನ್ ಖಾನ್ ಮತ್ತು ತಂಗಿ ಅರ್ಪಿತಾ ಖಾನ್
ಸಲ್ಮಾನ್ ಖಾನ್ ಮತ್ತು ತಂಗಿ ಅರ್ಪಿತಾ ಖಾನ್

ಮುಂಬೈ: ಕುಟುಂಬದ ಕಷ್ಟದ ಸಮಯದಲ್ಲಿ ತಮ್ಮ ಜೊತೆಗಿದ್ದ ಎಲ್ಲ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ಅರ್ಪಿತಾ ಖಾನ್, ಇನ್ನುಳಿದಿದ್ದನ್ನು ದೇವರಿಗೆ ಬಿಡಲಿದ್ದೇವೆ ಎಂದಿದ್ದಾರೆ.

೨೦೦೨ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಹೇಳಿ ಸಲ್ಮಾನ್ ಖಾನ್ (೪೯) ಅವರಿಗೆ ಬಾಂಬೆ ಸೆಷನ್ ಕೋರ್ಟ್ ೫ ವರ್ಷಗಳ ಕಠಿಣ ಸಜೆ ನೀಡಿತ್ತು. ಆದರೆ ಬಾಂಬೆ ಹೈಕೋರ್ಟ್ ಸಲ್ಮಾನ್ ಖಾನ್ ಅವರಿಗೆ ಮುಂದಿನ ವಿಚಾರಣೆ ಮೇ ೮ ರಂದು ನಡೆಯುವುದರಿಂದ ಅಂದೇ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿತ್ತು.

"ಇಂದು ಜೀವನದ ಏರು ಪೇರು- ಏಳು ಬೀಳುಗಳಿಂದ ತುಂಬಿದ ದಿನ. ಉಳಿದಿದ್ದನ್ನು ದೇವರಿಗೆ ಬಿಟ್ಟು ಪ್ರಾರ್ಥನೆ ಸಲ್ಲಿಸುತ್ತೇವೆ. ನಮ್ಮ ಜೊತೆ ಇದ್ದುದ್ದಕ್ಕೆ ಧನ್ಯವಾದಗಳು!" ಎಂದು ಅರ್ಪಿತಾ ಕಳೆದ ರಾತ್ರಿ ಟ್ವೀಟ್ ಮಾಡಿದ್ದಾರೆ.

ದಭಾಂಗ್ ಸ್ಟಾರ್ ನ ಇಬ್ಬರು ಸಹೋದರರು, ಸಹೋದರಿಯರು ಹಾಗು ಪೋಷಕರು ತೀರ್ಪು ನೀಡುವಾಗ ಜೊತೆಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com