ಸ್ವಘೋಷಿತ ಸುಳ್ಳುಕಾರರು ಮತ್ತು ಕೊಚ್ಚೆ; ಮಾಧ್ಯಮಗಳ ಮೇಲೆ ಕೆಂಡ ಕಾರಿದ ತರೂರ್

ಮಾಧ್ಯಮಗಳು ಸ್ವಘೋಷಿತ ಸುಳ್ಳುಕಾರರು ಮತ್ತು ಕೊಚ್ಚೆ ಎಂದು ಜರಿದಿರುವ ಕಾಂಗ್ರೆಸ್ ನೇತಾರ ಶಶಿ ತರೂರ್ ಮಾಧ್ಯಮಗಳ ಮೇಲೆ ಕಿಡಿ ಕಾರಿದ್ದಾರೆ.
ಶಶಿ ತರೂರ್
ಶಶಿ ತರೂರ್
Updated on

ತಿರುವನಂತಪುರಮ್: ಮಾಧ್ಯಮಗಳು ಸ್ವಘೋಷಿತ ಸುಳ್ಳುಕಾರರು ಮತ್ತು ಕೊಚ್ಚೆ ಎಂದು ಜರಿದಿರುವ ಕಾಂಗ್ರೆಸ್ ನೇತಾರ ಶಶಿ ತರೂರ್ ಮಾಧ್ಯಮಗಳ ಮೇಲೆ ಕಿಡಿ ಕಾರಿದ್ದಾರೆ.

"ನಾನು ಪೊಲೀಸರೊಂದಿಗೆ ಮಾತನಾಡುತ್ತೇನೆ, ಸ್ವಘೋಷಿತ ಸುಳ್ಳುಕಾರರು ಮತ್ತು ಕೊಚ್ಚೆಯೊಂದಿಗಲ್ಲ" ಎಂದು ತಮ್ಮ ಪತ್ನಿ ಸುನಂದಾ ಪುಷ್ಕರ್ ಅವರ ನಿಘೂಡ ಸಾವಿನ ಬಗ್ಗೆ ಅವರ ಸಹಚರರು ಸತ್ಯವನ್ನೇಕೆ ನುಡಿಯುತ್ತಿಲ್ಲ ಎಂದು ಮಾಧ್ಯಮ ವರದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಕೆಂಡಾಮಡಲವಾಗಿದ್ದಾರೆ.

ದೆಹಲಿ ಪೊಲೀಸರು ತರೂರ್ ಸಹಚರರು ಹಾಗು ಶಂಕಿತರಾದ ಮೂವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ದೆಹಲಿ ನ್ಯಾಯಾಲಯ ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ವರದಿಗಾರರು ತರೂರ್ ಅವರನ್ನು ಪ್ರಶ್ನಿಸಿದ್ದರು.

ತರೂರ್ ಅವರ ಮನೆಗೆಲಸದ ವ್ಯಕ್ತಿ ನರೈನ್ ಸಿಂಗ್, ಚಾಲಕ ಭಜರಂಗಿ ಮತ್ತು ಗೆಳೆಯ ಸಂಜಯ್ ದೆವಾನ್ ಈ ಮೂವರು ಶಂಕಿತರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com