ಇಬ್ಬರು ಭಾರತೀಯರ ಮೃತ ದೇಹಗಳನ್ನು ಹಿಂದಿರುಗಿಸಿದ ಪಾಕಿಸ್ತಾನ ರೇಂಜರ್ಸ್

ಚೆನಾಬ್ ನದಿಯಲ್ಲಿ ಪತ್ತೆಯಾದ ಭಾರತೀಯರ ಎರಡು ಮೃತ ದೇಹಗಳನ್ನು ಪಾಕಿಸ್ತಾನ ರೇಂಜರ್ ಗಳು ಶನಿವಾರ ಜಮ್ಮು ಜಿಲ್ಲೆಯಲ್ಲಿ ಬಿ ಎಸ್ ಎಫ್ (ಗಡಿ ಭದ್ರತಾ ಪಡೆ)
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಜಮ್ಮು: ಚೆನಾಬ್ ನದಿಯಲ್ಲಿ ಪತ್ತೆಯಾದ ಭಾರತೀಯರ ಎರಡು ಮೃತ ದೇಹಗಳನ್ನು ಪಾಕಿಸ್ತಾನ ರೇಂಜರ್ ಗಳು ಶನಿವಾರ ಜಮ್ಮು ಜಿಲ್ಲೆಯಲ್ಲಿ ಬಿ ಎಸ್ ಎಫ್ (ಗಡಿ ಭದ್ರತಾ ಪಡೆ) ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

"ಸರಿ ಸುಮಾರು ೯:೧೫ ಘಂಟೆ ರಾತ್ರಿ ಸಮಯದಲ್ಲಿ ನೆನ್ನೆ ಪಾಕಿಸ್ತಾನ ಪಡೆಗಳು ತಮ್ಮ ಇನಾಯತ್ ಗಡಿಯಿಂದ ಭಾರತೀಯರ ಎರಡು ಮೃತ ದೇಹಗಳನ್ನು ಆರ್ ಎಸ್ ಪುರದ ಅಕ್ಟೋರಿ ಗಡಿ ಔಟ್ ಪೋಸ್ಟ್ ನಲ್ಲಿ ಬಿ ಎಸ್ ಎಫ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ" ಎಂದು ಭಾನುವಾರ ಚಳಿಗಾಲದ ರಾಜಧಾನಿ ಜಮ್ಮುವಿನಲ್ಲಿ ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಮೃತ ಪಟ್ಟವರು ಕಲ್ಸಿಯಾನ್ ಪ್ರದೇಶದ (ರಜೌರಿ ಜಿಲ್ಲೆ) ನಿವಾಸಿ ಸುನಿಲ್ ಕುಮಾರ್ ಅವರ ಪತ್ನಿ ಅನಿತಾ ಚೌಧರಿ ಮತ್ತು ಅವರ ಮೂರು ವರ್ಷದ ಮಗ ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ.

"ಮೃತಪಟ್ಟ ಅನಿತಾ ಚೌಧರಿ ಅವರ ಸಹೋದರನಿಗೆ ಮೃತ ದೇಹಗಳನ್ನು ಒಪ್ಪಿಸಲಾಗಿದೆ.

"ಏಪ್ರಿಲ್ ೨೮ ೨೦೧೫ ರಂದು ಅಖ್ನೂರ್ ಪ್ರದೇಶದ ಚೆನಾಬ್ ನದಿಗೆ ಮಗನೊಂದಿಗೆ ಅನಿತಾ ನೆಗೆದಿದ್ದರು ಮತ್ತು ಪಾಕಿಸ್ತಾನದೆಡೆಗೆ ಕೊಚ್ಚಿಹೋಗಿದ್ದರು ಎಂದು ತಿಳಿದುಬಂದಿದೆ"

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com