ಮಂಗಳೂರು ಜೈಲಿನಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳ ಕೊಲೆ

ಮಂಗಳೂರಿನ ಸಬ್ ಜೈಲಿನಲ್ಲಿ ಕೈದಿಗಳ ಮಧ್ಯ ಸೋಮವಾರ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ...
ಮೃತ ಮಾಡೂರು ಯೂಸಫ್
ಮೃತ ಮಾಡೂರು ಯೂಸಫ್

ಮಂಗಳೂರು: ಮಂಗಳೂರಿನ ಸಬ್ ಜೈಲಿನಲ್ಲಿ ಕೈದಿಗಳ ಮಧ್ಯ ಸೋಮವಾರ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ವಿಚಾರಣಧೀನ ಕೈದಿಗಳು ಮೃತಪಟ್ಟಿದ್ದಾರೆ ಮತ್ತು 6 ಖೈದಿಗಳು ಗಾಯಗೊಂಡಿದ್ದಾರೆ.

ಭೂಗತ ಪಾತಕಿ ದಾವೂದ್ ಸಹಚರ ಮಾಡೂರು ಯೂಸಫ್(42) ಹಾಗೂ ಗಣೇಶ್ ಶೆಟ್ಟಿ ಎಂಬ ಕೈದಿಗಳನ್ನು ಕೊಲೆ ಮಡಲಾಗಿದ್ದು, ಗಾಯಗೊಂಡ ಆರು ಕೈದಿಗಳನ್ನು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೂಗತ ಪಾತಕಿಯ ಸಹಚರ ಯೂಸಫ್‌ನನ್ನು ವಿದೇಶದಿಂದ ಬಂಧಿಸಿ ಕರೆ ತರಲಾಗಿತ್ತು.

ಹಲವು ಕೊಲೆ ಪ್ರಕರಣಗಳಲ್ಲಿ ವಿಚಾರಣಾಧೀಕ ಕೈದಿಯಾಗಿದ್ದ ಭೂಗತ ಪಾತಕಿ ವಿಕ್ಕಿಶೆಟ್ಟಿ ಸಹಚರ ಆಕಾಶಭವನ್ ಶರಣ್ ತಂಡದ ಕೈದಿಗಳು ಗುಂಪು ಈ ಕೃತ್ಯ ಎಸಗಿದೆ ಎನ್ನಲಾಗಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com