ಮಂಗಳೂರು ಜೈಲಿನಲ್ಲಿ ಜೋಡಿ ಕೊಲೆ ಪ್ರಕರಣ: ಜೈಲು ಅಧೀಕ್ಷಕ ಸೇರಿ ನಾಲ್ವರ ಅಮಾನತು

ಕಳೆದ ವಾರ ಮಂಗಳೂರಿನ ಸಬ್‌ಜೈಲಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಸಂಬಂಧ ಜೈಲಿನ ಅಧೀಕ್ಷಕ ಓಬಳೇಶ್ವರ ಸೇರಿದಂತೆ ನಾಲ್ವರನ್ನು...
ಮೃತ ಮಾಡೂರು ಯೂಸಫ್
ಮೃತ ಮಾಡೂರು ಯೂಸಫ್
Updated on

ಮಂಗಳೂರು: ಕಳೆದ ವಾರ ಮಂಗಳೂರಿನ ಸಬ್‌ಜೈಲಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಸಂಬಂಧ ಜೈಲಿನ ಅಧೀಕ್ಷಕ ಓಬಳೇಶ್ವರ ಸೇರಿದಂತೆ ನಾಲ್ವರನ್ನು ಅಮಾನತು ಮಾಡಲಾಗಿದೆ.

ಕರ್ತವ್ಯಲೋಪ ಹಿನ್ನೆಲೆಯಲ್ಲಿ ಜೈಲು ಅಧೀಕ್ಷಕ ಸೇರಿದಂತೆ ನಾಲ್ವರನ್ನು ಅಮಾನತು ಮಾಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎಸ್.ಮುರಗನ್ ಅವರು ಶಿಫಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬಂದೀಖಾನೆ ಇಲಾಖೆ ಎಡಿಜಿಪಿ ಕಮಲ್ ಪಂತ್ ನಾಲ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕಳೆದ ನವೆಂಬರ್ 2ರಂದು ಭೂಗತ ಪಾತಕಿ ದಾವೂದ್ ಸಹಚರ ಮಾಡೂರು ಯೂಸಫ್(42) ಹಾಗೂ ಛೋಟಾ ಶಕೀಲ್ ಸಹಚರ ಗಣೇಶ್ ಶೆಟ್ಟಿ ಎಂಬ ವಿಚಾರಣಾಧೀನ ಕೈದಿಗಳನ್ನು ಕೊಲೆ ಮಡಲಾಗಿತ್ತು.

ಕೈದಿಗಳ ಹತ್ಯೆಯ ನಂತರ ಪರಿಶೀಲನೇ ನಡೆಸಿದಾಗ 17 ಮೊಬೈಲ್ ಹಾಗೂ ಮಾರಾಕಾಸ್ತ್ರಗಳು ಪತ್ಯೆಯಾಗಿದ್ದವು.

ಹಲವು ಕೊಲೆ ಪ್ರಕರಣಗಳಲ್ಲಿ ವಿಚಾರಣಾಧೀಕ ಕೈದಿಯಾಗಿದ್ದ ಭೂಗತ ಪಾತಕಿ ವಿಕ್ಕಿಶೆಟ್ಟಿ ಸಹಚರ ಆಕಾಶಭವನ್ ಶರಣ್ ತಂಡದ ಕೈದಿಗಳ ಗುಂಪು ಈ ಜೋಡಿ ಕೊಲೆ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com