ಭುವನೇಶ್ವರ: ಒರಿಸ್ಸಾದ ಪೂರಿ ಜಗನ್ನಾಥ ದೇವಾಲಯದ ಮುಂಭಾಗದಲ್ಲಿ ಕಾಲ್ತುಳಿದಂತಹ ವಾತಾವರಣ ಸೃಷ್ಟಿಯಾಗಿ ಬುಧವಾರ ವಯಸ್ಕರೊಬ್ಬರು ಮೃತಪಟ್ಟಿದ್ದಾರೆ.
ದೇವಾಸ್ಥಾನದ ದ್ವಾರದ ಮುಂದೆ ಜಮಾಯಿಸಿದ್ದ ಅತಿ ದೊಡ್ಡ ಸರತಿ ಸಾಲಿನಲ್ಲಿ ನಿಂತಿದ್ದ ನಿಧಿ ಬೆಹೆರಾ ಎಂಬುವರು ಬಿಸಿಲಿಗೆ ಹಾಗೂ ನುಕಾಟದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಕೊನೆಯುಸಿರೆಳೆದರು ಎಂದು ಕೂಡ ಪೊಲೀಸರು ಹೇಳಿದ್ದಾರೆ.
'ಪಾಯಾ ಶ್ರದ್ಧಾ' ಅಂಗವಾಗಿ ಲಕ್ಷಾಂತರ ಭಕ್ತರು ಪೂರಿ ಜಗನ್ನಾಥ ದೇವಾಲಯದ ಎದುರು ನೆರೆದಿದ್ದರು ಆದರೇ ಯಾವುದೇ ದೊಡ್ಡ ದುರ್ಘಟನೆ ಸಂಭವಿಸಿಲ್ಲ ಎಂದು ಪೂರಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವನಬಿಹಾರಿ ಸಾಹು ತಿಳಿಸಿದ್ದಾರೆ.
Advertisement