ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ ಬೆಂಗಾಲಿ ಕವಿ

ಜನಪ್ರಿಯ ಬೆಂಗಾಲಿ ಕವಿ ಮಂದಕ್ರಾಂತ ಸೇನ್ ಅವರು ಬುಧವಾರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರವನ್ನು ಹಿಂದಿರುಗಿಸುವುದಾಗಿ ಹೇಳಿದ್ದಾರೆ. ಸಮಾಜದಲ್ಲಿ ಹೆಚ್ಚುತ್ತಿರುವ
ಜನಪ್ರಿಯ ಬೆಂಗಾಲಿ ಕವಿ ಮಂದಕ್ರಾಂತ ಸೇನ್
ಜನಪ್ರಿಯ ಬೆಂಗಾಲಿ ಕವಿ ಮಂದಕ್ರಾಂತ ಸೇನ್

ಕೋಲ್ಕತ್ತಾ: ಜನಪ್ರಿಯ ಬೆಂಗಾಲಿ ಕವಿ ಮಂದಕ್ರಾಂತ ಸೇನ್ ಅವರು ಬುಧವಾರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರವನ್ನು ಹಿಂದಿರುಗಿಸುವುದಾಗಿ ಹೇಳಿದ್ದಾರೆ. ಸಮಾಜದಲ್ಲಿ ಹೆಚ್ಚುತ್ತಿರುವ ಅಸಹನೆ ಮತ್ತು ಕೋಮುದ್ವೇಷವನ್ನು ವಿರೋಧಿಸಿ ಈ ಪ್ರಶಸ್ತಿ ಹಿಂದಿರುಗಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಬೆಂಗಾಲಿಯ ತಮ್ಮ ಕವನ ಸಂಕಲನಕ್ಕೆ ಸೇನ್ ಅವರು ೨೦೦೪ರಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು.

ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಬೀಫ್ ತಿಂದ ವದಂತಿಯ ಮೇಲೆ ಮುಸ್ಲಿಂ ಒಬ್ಬನನ್ನು ಕೊಂದದ್ದು ಮತ್ತು ದೇಶದಾದ್ಯಂತ ಬಹರಹಗಾರ ಮೇಲೆ ನಡೆಯುತ್ತಿರುವ ದಾಳಿಯನ್ನು ವಿರೋಧಿಸಿ ಈ ಪುರಸ್ಕಾರವನ್ನು ಹಿಂದಿರುಗಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ದೇಶದಲ್ಲಿ ವಿಚಾರವಾದಿಗಳು ಸಂಶೋಧಕರ ಕೊಲೆ ಮತ್ತು ದಾದ್ರಿಯಲ್ಲಿ ಮೊಹಮ್ಮದ್ ಅಕ್ಲಕ್ ಅವರ ಕೊಲೆ ವಿರೋಧಿಸಿ ಇಲ್ಲಿಯವರೆಗೆ ೨೦ ಕ್ಕೂ ಹೆಚ್ಚು ಬರಹಗಾರರು ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com