ಆಂಧ್ರ ಪ್ರದೇಶ ರಾಜಧಾನಿಯ ಸಂಸ್ಥಾಪನಾ ಕಾರ್ಯಕ್ರಮಕ್ಕೆ ಬರುವುದಿಲ್ಲ: ಜಗನ್

ಆಂಧ್ರಪ್ರದೇಶದ ರಾಜಧಾನಿ ನಗರ 'ಅಮರಾವತಿ' ನಿರ್ಮಾಣದಲ್ಲಿ ಟಿಡಿಪಿ ಸರ್ಕಾರ 'ರಿಯಲ್ ಎಸ್ಟೇಟ್ ವ್ಯವಹಾರ' ನಡೆಸುತ್ತಿದೆ ಎಂದು ದೂರಿರುವ ವೈ ಎಸ ಆರ್ ಕಾಂಗ್ರೆಸ್
ವೈ ಎಸ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ ಎಸ್ ಜಗನ್ಮೋಹನ್ ರೆಡ್ಡಿ
ವೈ ಎಸ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ ಎಸ್ ಜಗನ್ಮೋಹನ್ ರೆಡ್ಡಿ
Updated on

ಹೈದರಾಬಾದ್: ಆಂಧ್ರಪ್ರದೇಶದ ರಾಜಧಾನಿ ನಗರ 'ಅಮರಾವತಿ' ನಿರ್ಮಾಣದಲ್ಲಿ ಟಿಡಿಪಿ ಸರ್ಕಾರ 'ರಿಯಲ್ ಎಸ್ಟೇಟ್ ವ್ಯವಹಾರ' ನಡೆಸುತ್ತಿದೆ ಎಂದು ದೂರಿರುವ ವೈ ಎಸ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ ಎಸ್ ಜಗನ್ಮೋಹನ್ ರೆಡ್ಡಿ ಅಕ್ಟೋಬರ್ ೨೨ ರಂದು ನಡೆಯಲಿರುವ ರಾಜಧಾನಿಯ ಸಂಸ್ಥಾಪನಾ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.

"ನಿಮ್ಮ ಲಂಚಕ್ಕಾಗಿ ನೀವು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದೀರಿ ಮತ್ತು ಜನರ ಹಿತಾಸಕ್ತಿಗೆ ಧಕ್ಕೆ ತರುತ್ತಿದ್ದೀರಿ. ನಿಮ್ಮ ಇಚ್ಛೆಯಂತೆ ಸಿಂಗಪುರದ ಖಾಸಗಿ ಸಂಸ್ಥೆಗಳಿಗೆ ಜಮೀನು ನೀಡುತ್ತಿದ್ದೀರಿ. ನಿಮ್ಮ ಹಗರಣದ ಹಾಗೂ ನಿಮ್ಮ ನಿಲುವಿನ ವಿರುದ್ಧ ಪ್ರತಿಭಟನೆಯಾಗಿ ನಾನು ಅಲ್ಲಿಗೆ (ಸಂಸ್ಥಾಪನಾ ಕಾರ್ಯಕ್ರಮ) ಬರುವುದಿಲ್ಲ" ಎಂದು ಎನ್ ಚಂದ್ರಬಾಬು ನಾಯ್ಡು ಅವರಿಗೆ ಬರೆದಿರುವ ಮುಕ್ತ ಪತ್ರದಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ ೨೨ ರಂದು ವಿಜಯದಶಮಿಯ ದಿನ ಆಂಧ್ರಪ್ರದೇಶದ ಅಮರಾವತಿ ನಗರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಹಲವಾರು ಗಣ್ಯ ವ್ಯಕ್ತಿಗಳಿಗೆ ಅಲ್ಲದೆ, ಸಾಮಾನ್ಯ ಜನಕ್ಕೆ, ರೈತರಿಗೆ ಆಹ್ವಾನ ನೀಡುವ ಮೂಲಕ ಎಲ್ಲರನ್ನೂ ಒಳಗೊಳ್ಳಲು ಪ್ರಯತ್ನಿಸಿದ್ದೇವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಸರ್ಕಾರ ಈ ಒಂದು ದಿನದ ಕಾರ್ಯಕ್ರಮಕ್ಕೆ ೪೦೦ ಕೋಟಿ ರೂಗಳನ್ನು ಅನಗತ್ಯ ವೆಚ್ಚ ಮಾಡುತ್ತಿದೆ ಎಂದು ಕೂಡ ಜಗನ್ ದೂರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com