ಶಿವಸೇನಾ ನಾಯಕನ ಮೇಲೆ ಗುಂಡಿನ ದಾಳಿ; ಸ್ಥಿತಿ ಗಂಭೀರ

ನೆನ್ನೆ ಮುಂಬೈನಲ್ಲಿ ಶಿವ ಸೇನಾ ನಾಯಕ ಅನಿಲ್ ಚೌಹಾನ್ ಅವರ ಮೇಲೆ ಗುರುತು ಹಚ್ಚದ ಇಬ್ಬರು ಗುಂಡಿನ ದಾಳಿ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ನೆನ್ನೆ ಮುಂಬೈನಲ್ಲಿ ಶಿವ ಸೇನಾ ನಾಯಕ ಅನಿಲ್ ಚೌಹಾನ್ ಅವರ ಮೇಲೆ ಗುರುತು ಹಚ್ಚದ ಇಬ್ಬರು ಗುಂಡಿನ ದಾಳಿ ನಡೆಸಿದ್ದಾರೆ.

ತಲೆಗೆ ಗುಂಡಿಟ್ಟು ಹೊಡೆದಿರುವ ದುಷ್ಕರ್ಮಿಗಳು ನಂತರ ಪರಾರಿಯಾಗಿದ್ದಾರೆ. ರಾತ್ರಿ ಸುಮಾರು ೮:೧೫ ಕ್ಕೆ ಈ ಘಟನೆ ನಡೆದಿದ್ದು ಅನಿಲ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಇದು ವ್ಯಯಕ್ತಿಕ ದ್ವೇಷ ಇರಬಹುದು ಎಂದಿರುವ ಪೊಲೀಸರು "ಕೆ ಎ ಎಂ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ. ಎಫ್ ಐ ಆರ್ ದಾಖಲು ಮಾಡಲಾಗಿದ್ದು ತನಿಖೆ ಪ್ರಾರಂಭವಾಗಿದೆ" ಎಂದು ಪೊಲೀಸ್ ಸಹ ನಿರ್ದೇಶಕ ಅವಿನಾಶ್ ಅಂಬುರೆ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com