ನವದೆಹಲಿ: ನಾಳೆ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ದೆಹಲಿಯ ಡಾ.ರಾಜೇಂದ್ರ ಪ್ರಸಾದ್ ಸರ್ವೋದಯ ಶಾಲೆಯಲ್ಲಿ 9ನೇ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.
ನಾನು ಶಾಲಾ ದಿನಗಳಲ್ಲಿ ತುಂಟ ಹುಡುಗನಾಗಿದ್ದೆ, ತಾಯಿಗೆ ಕಾಟ ಕೊಡುತ್ತಿದ್ದೆ. ಆರಂಭದ 3-4 ವರ್ಷ ನಾನು ಶಾಲೆಗೆ ಹೋಗಿರಲಿಲ್ಲ. ನಮ್ಮ ಮನೆಯಿಂದ ಶಾಲೆ ಐದು ಕಿ.ಮೀ. ದೂರವಿತ್ತು. ಮಳೆ ಬಂದಾಗ ಶಾಲೆಗೆ ಹೋಗುವುದು ತುಂಬಾ ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲೂ ನನ್ನ ತಾಯಿ ತುಂಬಾ ಕಷ್ಟಪಟ್ಟು ನನಗೆ ಓದಿಸಿದಳು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.
ಭಾರತೀಯ ಸಂವಿಧಾನದ ರಚನೆ ಹಾಗೂ ಆಶಯಗಳು ಸೇರಿದಂತೆ ರಾಜಕೀಯ ಇತಿಹಾಸದ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಕ್ಕಳಿಗೆ ಪಾಠ ಮಾಡಿದರು.
Advertisement