ಶಿವರಾಜ್ ಕುಮಾರ್: ಮಹದಾಯಿ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತೆ. ನಾವು ನಮ್ಮ ನೀರನ್ನು ಕೇಳಿದ್ದೇವೆ, ನಮ್ಮ ಪಾಲಿನ ನೀರು ನಮಗೆ ಕೊಡಲಿ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ. ಕಷ್ಟ ಬಂದಿದೆ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಒಗ್ಗಟ್ಟಾಗಿ ಎದುರಿಸಬೇಕು ರೈತರು ಧೈರ್ಯವಾಗಿರಬೇಕು. ನಿಮ್ಮ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇವೆ. ರೈತರ ಹೋರಾಟಕ್ಕೆ ಎಲ್ಲಿಗೆ ಬೇಕಾದರೂ ನಾವು ಬರಲು ಸಿದ್ಧ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ. ನಮ್ಮೆಲ್ಲರ ಕೂಗು ಭಾರತಕ್ಕೆ ಅಲ್ಲ, ಇಡೀ ವಿಶ್ವಕ್ಕೆ ಕೇಳಬೇಕು. ನಾವು ನಮ್ಮ ನೀರನ್ನು ಕೇಳಿದ್ದೇವೆ, ಪಾಕಿಸ್ತಾನದ ನೀರಲ್ಲ. ತಮಿಳುನಾಡಿಗೆ ನಾವು ಕಾವೇರಿ ನೀರು ಕೊಟ್ಟಿದ್ದೇವೆ. ನಮ್ಮ ಪಾಲಿನ ನೀರು ನಮಗೆ ಕೊಡಲಿ ಎಂದು ಶಿವರಾಜ್ ಕುಮಾರ್ ಗುಡುಗಿದ್ದಾರೆ.