ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ಲಾತೂರ್ ಗೆ ನೀರು ಪೂರೈಕೆ: ಪ್ರಧಾನಿ ಮೋದಿಯನ್ನು ಪ್ರಶಂಸಿಸಿದ ಕೇಜ್ರಿವಾಲ್

ಬರಪೀಡಿತ ಲಾತೂರ್ ಗೆ ನೀರು ಪೂರೈಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಕಾರ್ಯದ ಬಗ್ಗೆ ಶ್ಲಾಘಿಸಿರುವ ಅರವಿಂದ್ ಕೇಜ್ರಿವಾಲ್...
ನವದೆಹಲಿ: ಬರಪೀಡಿತ ಲಾತೂರ್ ಗೆ ನೀರು ಪೂರೈಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಕಾರ್ಯದ ಬಗ್ಗೆ ಶ್ಲಾಘಿಸಿರುವ ಅರವಿಂದ್ ಕೇಜ್ರಿವಾಲ್, ತಾವು ಕೂಡ ನೀರು ಪೂರೈಕೆ ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ಪೂರ್ವ ಮಹಾರಾಷ್ಟ್ರದಲ್ಲಿನ ಮರಾಠಾವಾಡದ ಲಾತೂರ್ ಪ್ರದೇಶಕ್ಕೆ 'ನೀರು ರೈಲು' ಮೂಲಕ ಮೀರಜ್ ನಿಂದ ಸೋಮವಾರ ನೀರು ಪೂರೈಸಲಾಯಿತು.
ಮಹಾರಾಷ್ಟ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯ ಲಾತೂರ್ ಗೆ ಸರಕು ಸಾಗಣೆ ರೈಲಿನ 50 ಬೋಗಿಗಳಲ್ಲಿ ನೀರು ಪೂರೈಕೆ ಮಾಡಿತ್ತು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಜ್ರಿವಾಲ್ ಪ್ರಶಂಸಿಸಿದ್ದಾರೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಕೇಜ್ರಿವಾಲ್, ಲಾತೂರ್ ನೀರು ಪೂರೈಕೆಗೆ ನಾವು ಪ್ರತಿ ದಿನ 10 ಲಕ್ಷ ಲೀಟರ್ ನೀರು ಪೂರೈಕೆ ಮಾಡಲು ಸಿದ್ಧವಿದ್ದೇವೆ ಎಂದು ತಿಳಿಸಿದ್ದಾರೆ. ನೀರು ರವಾನೆಗೆ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ರೈಲು ಮುಖಾಂತರ ಲಾತೂರ್ ಗೆ ನೀರು ಪೂರೈಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಕೆಲಸ ಶ್ಲಾಘನೀಯ ಎಂದ ಅವರು, 21ನೇ ಶತಮಾನದಲ್ಲೂ ನೀರಿನ ಬವಣೆಯಿಂದ ಜನರು ಸಾಯುತ್ತಾರೆನ್ನುವುದು ಇಡಿ ದೇಶಕ್ಕೆ ನಾಚಿಕೆಗೇಡು. ಲಾತೂರ್ ಜನಕ್ಕೆ ಸಹಾಯ ಮಾಡುವುದು ಇಡೀ ದೇಶದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲೂ ನೀರಿನ ಸಮಸ್ಯೆಯಿದೆ. ಆದರೆ, ಲಾತೂರ್ ಸ್ಥಿತಿಯನ್ನು ಗಣನೆಗೆ ತೆಗೆದುಕೊಂಡರೆ, ಅಲ್ಲಿನ ಜನರಿಗೂ ನಾವು ಸಹಾಯ ಮಾಡಬೇಕಿದೆ ಎಂದು ಅವರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com