ಸಮ ಬೆಸ ನಿಯಮ ಉಲ್ಲಂಘನೆ; ಕ್ಷಮೆ ಕೋರಿದ ಬಿಜೆಪಿ ಸಂಸದ-ನಟ ಪರೇಶ್ ರಾವಲ್

ದೆಹಲಿಯಲ್ಲಿ ಎಎಪಿ ಸರ್ಕಾರ ಜಾರಿ ಮಾಡಿರುವ ಸಮ ಬೆಸ ವಾಹನ ನಿಯಂತ್ರಣ ನಿಯಮವನ್ನು ಉಲ್ಲಂಘಿಸಿದ್ದ ಬಿಜೆಪಿ ಸಂಸದ ಮತ್ತು ಬಾಲಿವುಡ್ ನಟ ಪರೇಶ್ ರಾವಲ್ ಸೋಮವಾರ ಮುಖ್ಯಮಂತ್ರಿ ಅರವಿಂದ್
ಬಿಜೆಪಿ ಸಂಸದ ಮತ್ತು ಬಾಲಿವುಡ್ ನಟ ಪರೇಶ್ ರಾವಲ್
ಬಿಜೆಪಿ ಸಂಸದ ಮತ್ತು ಬಾಲಿವುಡ್ ನಟ ಪರೇಶ್ ರಾವಲ್

ನವದೆಹಲಿ: ದೆಹಲಿಯಲ್ಲಿ ಎಎಪಿ ಸರ್ಕಾರ ಜಾರಿ ಮಾಡಿರುವ ಸಮ ಬೆಸ ವಾಹನ ನಿಯಂತ್ರಣ ನಿಯಮವನ್ನು ಉಲ್ಲಂಘಿಸಿದ್ದ ಬಿಜೆಪಿ ಸಂಸದ ಮತ್ತು ಬಾಲಿವುಡ್ ನಟ ಪರೇಶ್ ರಾವಲ್ ಸೋಮವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕ್ಷಮೆ ಕೋರಿದ್ದಾರೆ.

"ಗಂಭೀರ ತಪ್ಪೆಸಗಿದೆ.. ಅರವಿಂದ್ ಜಿ ಮತ್ತು ದೆಹಲ ನಾಗರಿಕರೆ ತಪ್ಪಾಯಿತು" ಎಂದು ನಿಯಮ ಮುರಿದು ದಂಡ ಕಟ್ಟಿದ ಮೇಲೆ ಬಿಜೆಪಿ ಸಂಸದ ಪರೇಶ್ ರಾವಲ್ ಟ್ವೀಟ್ ಮಾಡಿದ್ದಾರೆ.

ಇಂದು ದೆಹಲಿ ರಸ್ತೆಗಳಿಗೆ ಬೆಸ ಸಂಖ್ಯೆಯ ನೊಂದಣಿ ವಾಹನಗಳಷ್ಟೇ ರಸ್ತೆಗಿಳಿಯಬಹುದಾಗಿದ್ದರೂ, ಸರಿ ಸಂಖ್ಯೆಯ ತಮ್ಮ ವೈಯಕ್ತಿಕ ವಾಹನದಲ್ಲಿ ಸೋಮವಾರ ಸಂಸತ್ತಿಗೆ ತೆರಳುವಾಗ ಪರೇಶ್ ದಂಡ ಕಟ್ಟಿದ್ದರು.

ಸೋಮವಾರ ಬಜೆಟ್ ಸೆಶನ್ ಜಾರಿಯಲ್ಲಿರುವುದರಿಂದ ಸಂಸದರು ಸಂಸತ್ತಿಗೆ ತೆರಳಲು ದೆಹಲಿ ಸರ್ಕಾರ ವಿಶೇಷ ಬಸ್ ವ್ಯವಸ್ಥೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com