"ಕೇವಲ ಬೆರಳಣಿಕೆಯಷ್ಟು ಜನರಿಗೆ ಮಾತ್ರ ತಪ್ಪು ಗ್ರಹಿಕೆ ಮೂಡುವಂತೆ ಮಾಡಲಾಗಿದೆ" ಎಂದಿರುವ ಅವರು ಅವರಷ್ಟೇ ಕಾಶ್ಮೀರದಲ್ಲಿನ ತೊಂದರೆಗೆ ಕಾರಣ ಎಂದಿದ್ದಾರೆ. ಜುಲೈ 8 ರಂದು ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ನಂತರ ನಡೆದ ಪ್ರತಿಭಟನೆ ಮತ್ತು ಹಿಂಸೆಯಲ್ಲಿ 55 ಜನ ಮೃತಪಟ್ಟು ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.