ಆಗಸ್ಟ್ 15 ರಂದು ಮಂಡ್ಯದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಶಾಲಾ ಮಕ್ಕಳು ಐಎಎಸ್ ಅಧಿಕಾರಿ ದಿವಂಗತ ಡಿ.ಕೆ. ರವಿ, ದಿವಂಗತ ಡಿವೈಎಸ್'ಪಿಗಳಾದ ಕಲ್ಲಪ್ಪ ಹಂಡಿಭಾಗ್ ಹಾಗೂ ಗಣಪತಿಯವರ ಫೋಟೊಗಳನ್ನು ಇಟ್ಟುಕೊಂಡು ಮೈದಾನದಲ್ಲಿ ಹಾಡಿಗೆ ನೃತ್ಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಸಚಿವ ಡಿ.ಕೆ. ಶಿವಕುಮಾರ್ ನೃತ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದರು.