ಪಿವಿ ಸಿಂಧು ಸಾಧನೆಗೆ ಉಗಿಯಬೇಕು ಎನಿಸುತ್ತಿದೆ: ಮಲಯಾಳಂ ಚಿತ್ರ ನಿರ್ದೇಶಕ

ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿರುವ ಪಿವಿ ಸಿಂಧು ಸಾಧನೆಯನ್ನು ಇಡೀ ದೇಶವೇ ಕೊಂಡಾಡಿ, ಸಂಭ್ರಮಿಸುತ್ತಿದೆ. ಆದರೆ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕರೊಬ್ಬರು ಪಿ ವಿ ಸಿಂಧು
ಮಲಯಾಳಂ ನಿರ್ದೇಶಕ ಮತ್ತು ಪಿವಿ ಸಿಂಧು
ಮಲಯಾಳಂ ನಿರ್ದೇಶಕ ಮತ್ತು ಪಿವಿ ಸಿಂಧು
Updated on

ನವದೆಹಲಿ: ರಿಯೋ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿರುವ ಪಿವಿ ಸಿಂಧು ಅವರ ಸಾಧನೆಯನ್ನು ಇಡೀ ದೇಶವೇ ಕೊಂಡಾಡಿ, ಸಂಭ್ರಮಿಸುತ್ತಿದೆ.

ಆದರೆ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕರೊಬ್ಬರು ಪಿ ವಿ ಸಿಂಧು ಅವರ ಸಾಧನೆ ಬಗ್ಗೆ ಅವಹೇಳನ ಮಾಡಿದ್ದಾರೆ.

ಓಝಿವೂ ದಿವಾಸತೇ ಕಲಿ ಮಲಯಾಳಂ ಚಿತ್ರದ ನಿರ್ದೇಶಕ ಸನಲ್ ಕುಮಾರ್ ಸರ್ದೇಶಿಯಾ ತಮ್ಮ ಫೇಸ್ ಬುಕ್ ನಲ್ಲಿ , ಸಿಂಧು ಅವರ ಸಾಧನೆ ಬಗ್ಗೆ ತೀರಾ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಾರೆ.

ಎಲ್ಲರೂ ಸಿಂಧು ಅವರ ಸಾಧನೆಯನ್ನು ಸಂಭ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಒಂದು ವೇಳೆ ನಾನು ಅವರ ರಿಯೋ ಒಲಂಪಿಕ್ಸ್ ಸಾಧನೆಗೆ ಉಗಿದರೇ ಎಂದು ಪೋಸ್ಟ್ ಹಾಕಿದ್ದಾರೆ. ಸಂಭ್ರಮಿಸುವುದಕ್ಕೆ ಏನಿದೆ ಎಂದು ಪ್ರಶ್ನಿಸಿದ್ದಾರೆ.

ನಿರ್ದೇಶಕನ ಈ ಪೋಸ್ಟ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಿಂಧು ಅಭಿಮಾನಿಗಳು ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ.

ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಎಲ್ಲರು ತನ್ನ ಪೋಸ್ಟ್ ಅನ್ನು ತಪ್ಪಾಗಿ ಅರ್ಥೈಸಿದ್ದಾರೆ. ನಾನು ಅದನ್ನು ತಮಾಷೆಗಾಗಿ ಹೇಳಿದ್ದು ಎಂದು ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com