ಹೈಕೋರ್ಟ್ ನಲ್ಲಿ ರಾಹುಲ್ ನೀಡಿರುವ ಹೇಳಿಕೆಯನ್ನು ಗಣನೆಗೆ ತೆಗೆದುಕೊಂಡ ವಿಭಾಗೀಯ ಪೀಠ, ಕಾಂಗ್ರೆಸ್ ಮುಖಂಡ ತಾನು ಗಾಂಧಿ ಹತ್ಯೆಗೆ ಆರ್ ಎಸ್ ಎಸ್ ಸಂಘಟನೆಯನ್ನು ದೂಷಿಸಲಿಲ್ಲ ಬದಲಾಗಿ ಜನ ಆ ಸಂಬಂಧವನ್ನು ಬೆಸೆದರು ಎಂಬ ಸ್ಪಷ್ಟ ಹೇಳಿಕೆ ನೀಡಿದರಷ್ಟೇ ಈ ಪ್ರಕರಣವನ್ನು ಇಲ್ಲಿಗೆ ಮುಗಿಸಲು ಸಾಧ್ಯ ಎಂದು ಹೇಳಿದೆ.