ಡಿಮಾನಿಟೈಸೇಶನ್ ಬಗ್ಗೆ ಅರುಣ್ ಜೈಟ್ಲಿ ಸರಿಯಾಗಿ ಪ್ಲಾನ್ ಮಾಡಿಲ್ಲ: ಸುಬ್ರಮಣಿಯನ್ ಸ್ವಾಮಿ

ನೋಟು ನಿಷೇಧದ ನಂತರ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಹಣಕಾಸು ಸಚಿವ ಅರುಣ್ ಜೇಟ್ಲಿ ಸರಿಯಾಗಿ ಪ್ಲಾನ್ ಮಾಡಿಲ್ಲ...
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ

ಕೊಯಂಬತ್ತೂರ್: ನೋಟು ನಿಷೇಧದ ನಂತರ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಹಣಕಾಸು ಸಚಿವ ಅರುಣ್ ಜೇಟ್ಲಿ ಸರಿಯಾಗಿ ಪ್ಲಾನ್ ಮಾಡಿಲ್ಲ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್  ಸ್ವಾಮಿ ಆರೋಪಿಸಿದ್ದಾರೆ.

ಕೊಯಂಬತ್ತೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, ನೋಟು ನಿಷೇಧ ಘೋಷಿಸುವ ಮುನ್ನ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ನಂತರ ವಷ್ಟೇ ಹಣಕಾಸು ಇಲಾಖೆ ಅನಾಣ್ಯೀಕರಣ ಘೋಷಿಸಬೇಕಿತ್ತು. ಆದರೇ ಹಣಕಾಸು ಇಲಾಖೆ ಅಗತ್ಯವಾದ ಪೂರ್ವ ತಯಾರಿ ಮಾಡಿಕೊಳ್ಳದ ಕಾರಣ ಜಮ ಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಎಟಿಎಂ ಗಳನ್ನು ಸ್ಥಾಪಿಸಿ, ನಿಷೇಧಿಸಿದ ನೋಟುಗಳ ಅಳತೆಯಲ್ಲೇ ಹೊಸ ನೋಟುಗಳನ್ನು ಮುದ್ರಿಸಿ, ಇದರಿಂದ ಎಟಿಎಂ ಬಳಕೆಗೆ ಉಪಯೋಗವಾಗುತ್ತದೆ ಎಂದು ನಾವು ಶಿಪಾರಸು ಮಾಡಿದ್ದೆವು. ಜೊತೆಗೆ ಆದಾಯ ತೆರಿಗೆಯನ್ನು ಇಳಿಕೆ ಮಾಡುವಂತೆ ನಾವು ಸಲಹೆ ನೀಡಿದ್ದೆವು, ಆದರೆ ಸರ್ಕಾರ ನಾವು ನೀಡಿದ್ದ ಯಾವುದೇ ಸಲಹೆಯನ್ನು ಅನುಷ್ಠಾನಕ್ಕೆ ತರಲಿಲ್ಲ ಎಂದು ಸ್ವಾಮಿ ಆಪಾದಿಸಿದ್ದಾರೆ.

ತಲೆದೋರಿರುವ ನಗದು ಬಿಕ್ಕಟ್ಟು ಹಾಗೂ ಹೊಸ ನೋಟುಗಳ ಹಂಚಿಕೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಅರುಣ್ ಜೇಟ್ಲಿ ಉತ್ತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ನೋಟು ನಿಷೇಧವನ್ನು ಅಧಿಕೃತವಾಗಿ ಘೋಷಿಸುವ ಮುನ್ನ ಕೆಲವರಿಗೆ ವಿಷಯ ಸೋರಿಕೆಯಾಗಿತ್ತು. ಈ ಸಂಬಂಧ ನಾವು ಯಾವುದೇ ಕೇಸು ದಾಖಲಿಸುತ್ತಿಲ್ಲ, ಆದರೆ ಸರ್ಕಾರ ಇದರ ವಿರುದ್ಧ ಕೇಸು ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com