ಕೇರಳ ಗ್ರಾಮೀಣ ಬ್ಯಾಂಕ್ ದರೋಡೆಗೆ ಯತ್ನ

ದುಷ್ಕರ್ಮಿಗಳು ಕೇರಳ ಗ್ರಾಮೀಣ ಬ್ಯಾಂಕ್ ನ ಮುಲ್ಲೆರಿಯಾ ಶಾಖೆಯಲ್ಲಿ ದರೋಡೆಗೆ ಯತ್ನಿಸಿದ ಘಟನೆ ಮಂಗಳವಾರ ಬೆಳಗಿನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕಾಸರಗೋಡು: ದುಷ್ಕರ್ಮಿಗಳು ಕೇರಳ ಗ್ರಾಮೀಣ ಬ್ಯಾಂಕ್ ನ ಮುಲ್ಲೆರಿಯಾ ಶಾಖೆಯಲ್ಲಿ ದರೋಡೆಗೆ ಯತ್ನಿಸಿದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರ ತಂಡ ಕಿಟಕಿಯ ಗ್ರಿಲ್ ಗಳನ್ನು ಕಟ್ ಮಾಡಿ ಬ್ಯಾಂಕ್ ಗೆ ನುಗ್ಗಿದ್ದಾರೆ. ಆದರೆ ಚಿನ್ನಾಭರಣ ಮತ್ತು ನಗದು ಇದ್ದ ಕೊಣೆ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ಅಧೂರ್ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ಅವರು ಹೇಳಿದ್ದಾರೆ.
ಕಳ್ಳರು ಬ್ಯಾಂಕ್ ನಲ್ಲಿದ್ದ ಒಂದು ಅಲರಾಂ ಅನ್ನು ಪತ್ತೆಹಚ್ಚಿ ಕಟ್ ಮಾಡಿದ್ದಾರೆ. ಆದರೆ ಮತ್ತೊಂದು ಅಲರಾಂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ನಗದು ಹಾಗೂ ಚಿನ್ನಾಭರಣ ಇದ್ದ ಕೊಣೆ ಪ್ರವೇಶಿಸಲು ಯತ್ನಿಸುತ್ತಿದ್ದ ವೇಳೆ ಹೊರಗಡೆ ಇದ್ದ ಎರಡನೇ ಅಲರಾಂ ಸೌಂಡ್ ಮಾಡಿದೆ. ಅಲ್ಲದೆ ನಗರದ ಗುರ್ಖಾಗಳಿಗೆ ಸಂದೇಶ ರವಾನಿಸಿದೆ. ಇದರಿಂದ ಎಚ್ಚೆತ್ತುಕೊಂಡ ಗುರ್ಖಾಗಳು ಕೂಡಲ ಸ್ಥಳಕ್ಕೆ ಆಗಮಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಸಂತೋಷ್ ತಿಳಿಸಿದ್ದಾರೆ.
'ನಾವು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಯಾವುದೇ ನಗದು ಕಳ್ಳತನವಾಗಿಲ್ಲ. ಆದರೆ ದರೋಡೆಗೆ ಯತ್ನಿಸಲಾಗಿದೆ' ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com