ಕಳ್ಳರು ಬ್ಯಾಂಕ್ ನಲ್ಲಿದ್ದ ಒಂದು ಅಲರಾಂ ಅನ್ನು ಪತ್ತೆಹಚ್ಚಿ ಕಟ್ ಮಾಡಿದ್ದಾರೆ. ಆದರೆ ಮತ್ತೊಂದು ಅಲರಾಂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ನಗದು ಹಾಗೂ ಚಿನ್ನಾಭರಣ ಇದ್ದ ಕೊಣೆ ಪ್ರವೇಶಿಸಲು ಯತ್ನಿಸುತ್ತಿದ್ದ ವೇಳೆ ಹೊರಗಡೆ ಇದ್ದ ಎರಡನೇ ಅಲರಾಂ ಸೌಂಡ್ ಮಾಡಿದೆ. ಅಲ್ಲದೆ ನಗರದ ಗುರ್ಖಾಗಳಿಗೆ ಸಂದೇಶ ರವಾನಿಸಿದೆ. ಇದರಿಂದ ಎಚ್ಚೆತ್ತುಕೊಂಡ ಗುರ್ಖಾಗಳು ಕೂಡಲ ಸ್ಥಳಕ್ಕೆ ಆಗಮಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಸಂತೋಷ್ ತಿಳಿಸಿದ್ದಾರೆ.